Saturday, July 20, 2024
Google search engine
Homeಜನಮನಸ್ನೇಹಿತನ ಕಣ್ಣಲ್ಲಿ ಸಂಚಾರಿ ವಿಜಯ್

ಸ್ನೇಹಿತನ ಕಣ್ಣಲ್ಲಿ ಸಂಚಾರಿ ವಿಜಯ್

ಸಂಚಾರಿ ವಿಜಯ್ ಜತೆ ವೆಂಕಟಾಚಲ ಹೆಚ್.ವಿ.

  • ನಟ ಸಂಚಾರಿ ವಿಜಯ್ ಹಾಗೂ ಮೈತ್ರಿ ನ್ಯೂಸ್ ಸಂಪಾದಕರಾದ -ವೆಂಕಟಾಚಲ.ಹೆಚ್.ವಿ ಒಂದೇ ಊರಿನವರು. ವಿಜಯ್ ಅವರನ್ನು ಎತ್ತಿ ಆಡಿ ಬೆಳೆಸಿದ ವೆಂಕಾಟಚಲ ಅವರ ಬರಹ ಕಣ್ಣಲ್ಲಿ ನೀರಾಡಿಸುತ್ತದೆ.

ತರಲೆ ತುಂಟಾಟ ಎಂದರೆ ತುಂಬಾ ಪ್ರಿಯವಾದದ್ದು, ಆತನಿಗೆ ಸಂಚಾರ ಮಾಡುವುದೆಂದರೆ ಬಹಳ ಇಷ್ಟ, ಆತ ಹಲವಾರು ಸಲ ಈ ತರಲೆಯಿಂದಲೆ ತುಂಟ ಎಂಬ ಬಿರುದನ್ನು ಪಡೆದುಕೊಂಡವನು, ಈ ತುಂಟ ಹುಡುಗನೇ ನಾನು ಅವನಲ್ಲ ಅವಳು ಚಲನ ಚಿತ್ರದ ನಟನೆಗೆ ಅತ್ಯುತಮ ನಟನ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡವನೇ ಸಂಚಾರಿ ವಿಜಯ್.

ಸಂಚಾರಿ ವಿಜಯನದು ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಸಿಂಗಟಗೆರೆ ಹೋಬಳಿಯ ರಂಗಾಪುರ, ವಿಜಯ್ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಂಚನಹಳ್ಳಿಯಲ್ಲಿ ಮುಗಿಸಿದವನು, ಈತನ ತಂದೆ ಬಸವರಾಜಪ್ಪನವರು ಕಂದಾಯ ಇಲಾಖೆಯ ನೌಕರರಾದರೆ, ತಾಯಿ ಗೌರಮ್ಮ ಪಂಚನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಸರ್್ ಆಗಿದ್ದರು. ತಂದೆ ಬಸವರಾಜಪ್ಪನವರು ತಬಲ ನುಡಿಸುತ್ತಿದ್ದರು, ತಾಯಿ ಗೌರಮ್ಮನವರು ಒಳ್ಳೆಯ ಜಾನಪದ ಗಾಯಕರಾಗಿದ್ದರು, ಭದ್ರಾವತಿಯ ಆಕಾಶವಾಣಿಯಲ್ಲಿ ಹಾಡುತ್ತಿದ್ದರು.

ಗೆಳೆಯ, ಪ್ರಜಾವಾಣಿ ಹಿರಿಯ ಪತ್ರಕರ್ತರಾದ ಡಿ.ಎಂ.ಕುರ್ಕೆ ಅವರ ಜತೆ ಸಂಚಾರಿ ವಿಜಯ್

ಸಂಚಾರಿ ವಿಜಯ್ ಕೂಡ ನಾನು ಓದುತ್ತಿದ್ದ ಪಂಚನಹಳ್ಳಿಯ ಶಾಲೆಯಲ್ಲಿಯೆ ಓದಿದ ಹುಡುಗ, ಆತ ನಮಗಿಂತ ಸುಮಾರು ಹನ್ನೆರಡು ವರ್ಷ ಚಿಕ್ಕವನು, ಪ್ರಾಥಮಿಕ ಶಾಲಾ ಹಂತದಲ್ಲೇ ಆತ ತುಂಬ ಚೂಟಿಯಾದ ಹುಡುಗಾನಾಗಿದ್ದಲ್ಲದೆ, ಆತನ ತಾಯಿ ಗೌರಮ್ಮ ಹಲವಾರು ಕಾರ್ಯಕ್ರಮಗಳಲ್ಲಿ ಹಾಡಲು ಬಂದಾಗ, ಅಮ್ಮನ ಜೊತೆ ಬರುತ್ತಿದ್ದ ವಿಜಯ್ ನಮ್ಮನ್ನು ಕಂಡ ಕೂಡಲೇ ಓಡಿ ಬರುತ್ತಿದ್ದ, ಆತ ಬಂದವನು ಸುಮ್ಮನಿರುತ್ತಿರಲಿಲ್ಲ ತರಲೆ ಜೊತೆಗೆ ಅಲ್ಲಿದವರನ್ನೆಲ್ಲಾ ಒಂದಲ್ಲ ಒಂದು ರೀತಿಯಲ್ಲಿ ಕೀಟಲೆ ಮಾಡುವ ಹುಡುಗನಾಗಿದ್ದ.

ಅವರ ಮನೆಯು ಪಂಚನಹಳ್ಳಿಯ ಆಸ್ಪತ್ರೆಯ ಆವರಣದಲ್ಲಿ ಇದ್ದರೂ ವಿಜಯ್ ಮಾತ್ರ ಯಾವಾಗಲೂ ಆ ಕಾಂಪೌಂಡ್ನಿಂದ ಆಚೆ ತಮ್ಮ ಗೆಳೆಯರ ಜೊತೆ ಚಿನ್ನಿದಾಂಡು, ಕ್ರಿಕೆಟ್, ರಜಾ ದಿನಗಳಲ್ಲಿ ತಮ್ಮ ಗೆಳೆಯರ ಜೊತೆ ಪಂಚನಹಳ್ಳಿಯ ತೋಟಗಳಿಗೆ ಹೋಗಿ ಬರುವುದು ವಿಜಯ್ಗೆ ತುಂಬಾ ಖುಷಿ ಕೊಡುತ್ತಿತ್ತು, ಚಿತ್ರಕಲೆಯಲ್ಲಿ ಮತ್ತು ರಂಗಭೂಮಿಯಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ ಹೊಂದಿದ್ದ ವಿಜಯ್ ಇಂಜಿನಿಯರ್ ಮುಗಿಸಿದ ನಂತರ ಕೆಲ ಕಾಲ ಅರೆಕಾಲಿಕ ಉಪನ್ಯಾಸಕರಾಗಿದ್ದರೂ, ರಂಗಭೂಮಿ ಆಸಕ್ತಿ ಇದ್ದದರಿಂದ ಸಂಚಾರಿ ಥಿಯೇಟರ್ ರಂಗತಂಡದಲ್ಲಿ ಹಲವಾರು ನಾಟಕಗಳಲ್ಲಿ ಅಭಿನಯಿಸುವ ಮೂಲಕ ರಂಗಭೂಮಿ ಮತ್ತು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ನಾನು ಅವನಲ್ಲ ಅವಳು ಚಿತ್ರದ ತೃತೀಯ ಲಿಂಗ ಪಾತ್ರಕ್ಕೆ ಸಂಚಾರಿ ವಿಜಯ್ಗೆ ಅತ್ಯುತಮ ನಟ ರಾಷ್ಟ್ರ ಪ್ರಶಸ್ತಿ ಲಭಿಸಿದ ಮೇಲೆ ಚಿತ್ರರಂಗದಲ್ಲಿ ಬಹುಮುಖ್ಯ ನಟನಾಗಿ ಗುರುತಿಸಿಕೊಂಡಿದ್ದ ವಿಜಯ್ ತಾನು ಓದಿ-ಬೆಳೆದ ಪಂಚನಹಳ್ಳಿ ಮತ್ತು ಪಂಚನಹಳ್ಳಿಯ ಬಾಲ್ಯದ ಗೆಳೆಯರು ಅಂದರೆ ತುಂಬಾ ಹಚ್ಚಿಕೊಂಡಿದ್ದರು, ಪಂಚನಹಳ್ಳಿಯಲ್ಲಿ ನಾನು ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು ವಿಜಯ್.

ಪಂಚನಹಳ್ಳಿಯ ಜನರು ಮತ್ತು ಗೆಳೆಯರು ನಮ್ಮ ಊರಿನವರೊಬ್ಬರು ಫಿಲ್ಮ್ ಆಕ್ಟರ್ ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು, ಸಮಯ ಸಿಕ್ಕಾಗಲೆಲ್ಲಾ ಪಂಚನಹಳ್ಳಿಗೆ ಬರುತ್ತಿದ್ದ ವಿಜಯ್ ತಮ್ಮ ಶಾಲಾ ಗೆಳೆಯರ ಜೊತೆ ನಾನೊಬ್ಬ ನಟ ಅನ್ನುವುದನ್ನು ಮರೆತು ಸಾಮಾನ್ಯರಂತೆ ಇದ್ದು ಬಿಡುತ್ತಿದ್ದರು.

ಚಿತ್ರರಂಗಕ್ಕೆ ತುಂಬಾ ಶ್ರಮ ಮತ್ತು ಪ್ರತಿಭೆಯ ಮೂಲಕ ಬಂದ ವಿಜಯ್ ಯಾವುದೇ ವಿವಾದಗಳಿಲ್ಲದೆ ತಮ್ಮ ವೃತ್ತಿ ಬದುಕನ್ನು ಮತ್ತಷ್ಟು ವಿಸ್ತರಿಸುವ ಕನಸನ್ನು ಕಟ್ಟಿಕೊಂಡವರು, ಇದರ ಜೊತೆಗೆ ಅವರು ಹಗಲು ರಾತ್ರಿ ಓದುವ ಹವ್ಯಾಸವನ್ನು ಇಟ್ಟುಕೊಂಡಿದ್ದರು, ಸ್ವಪ್ನ ಹೌಸ್ಗೆ ಯಾವುದೇ ಹೊಸ ಪುಸ್ತಕ ಬಂದರೂ ಸ್ವತಃ ಅವರೆ ಹೋಗಿ ತರುತ್ತಿದ್ದರು.

ತುಂಬಾ ಒಳ್ಳೆಯತನದ ಜೊತೆಗೆ ಹೃದಯವಂತಿಕೆ ಇಟ್ಟುಕೊಂಡಿದಂತಹ ವಿಜಯ್ ಕೋವಿಡ್-19ರ ಸಂದರ್ಭದಲ್ಲಿ ತಮ್ಮ ನಿರೀಕ್ಷೆಗೂ ಮೀರಿ ಸಹಾಯ ಹಸ್ತ ನೀಡಿದರು, ಇವರ ತಂದೆ ತಾಯಿ ಇಬ್ಬರೂ ಸಕರ್ಾರಿ ನೌಕರರಾಗಿದ್ದರೂ ಇವರು ಇನ್ನೂ ಓದುತ್ತಿರುವಾಗಲೆ ಅಕಾಲಿಕ ಮರಣ ಹೊಂದಿದ್ದರಿಂದ ವಿಜಯ್ ತುಂಬಾ ಸಂಕಷ್ಟಗಳನ್ನು ಎದುರಿಸಬೇಕಾಯಿತು.

ಇಂತಹ ಸುಂದರ ಹುಡುಗ ಕನ್ನಡ ಚಲನ ಚಿತ್ರರಂಗದಲ್ಲಿ ಇನ್ನೂ ಬಹು ದೂರ ಸಾಗ ಬೇಕಾಗಿತ್ತು, ಆದರೆ ಸಾವು ವಿಜಯ್ ಅವರಿಗೆ ಅಪಘಾತದ ನೆಪದಲ್ಲಿ ಬಂದದ್ದು ಒಳ್ಳೆಯತನ ಬದುಕಲು ಬಿಡುವುದಿಲ್ಲ ಅನ್ನಿಸುತ್ತದೆ, ಇಂತಹ ಪ್ರತಿಭೆಯನ್ನು ಕಳೆದುಕೊಂಡ ಚಿತ್ರರಂಗವೊಂದು ಕಡೆ ಬಡವಾದರೆ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಈಗ ತನ್ನ ನೆಲದಲ್ಲಿ ರೂಪಿಸಿದ್ದ ಕಲಾವಿದನೊಬ್ಬನನ್ನು ಕಳೆದುಕೊಂಡಿದೆ, ಸಂಚಾರಿ ವಿಜಯ್ ಕಡೂರು ತಾಲ್ಲೂಕಿನಂತೆಯೆ ಅರಸೀಕೆರೆ, ತಿಪಟೂರು ತಾಲ್ಲೂಕುಗಳಲ್ಲೂ ತಮ್ಮ ಊರಿನ ಕಡೆಯ ನಟ ಎಂಬ ಖ್ಯಾತಿಯನ್ನು ಗಳಿಸಿಕೊಂಡಿದ್ದರು.

ನಾನು, ನನ್ನ ಗೆಳೆಯರಾದ ರವಿ, ಅಪ್ಪಾಜಿ, ಚಂದ್ರಶೇಖರ್, ರಮೇಶ್ ಮುಂತಾದವರೆಲ್ಲಾ ಎತ್ತಿ ಆಡಿಸಿದ್ದಲ್ಲದೆ ಆತನ ತರಲೆಗಳಿಗೆ ನಾವೆಲ್ಲಾ ಸಾತು ಕೊಟ್ಟು ತಮಾಷೆ ನೋಡುತ್ತಿದ್ದವರು, ಸಂಚಾರಿ ವಿಜಯ್ಗೆ ಕೆಂಚಮಾರಯ್ಯ ಮಾಸ್ಟರ್ ಎಂದರೆ ಬಹಳ ಪ್ರೀತಿ, ವಿಜಯ್ಗೆ ರಾಷ್ಟ್ರ ಪ್ರಶಸ್ತಿ ಬಂದಾಗ ಕೆಂಚಮಾರಯ್ಯನವರ ಮನೆಯಲ್ಲಿಯೆ ಸನ್ಮಾನವನ್ನು ಮಾಡಲಾಯಿತು.

ಆಗಾಗ್ಗೆ ಕೆಂಚಮಾರಯ್ಯನವರನ್ನು ಕಾಣಬೇಕು ಅನ್ನುತ್ತಿದ್ದ ವಿಜಯ್, ಕೆಂಚಮಾರಯ್ಯನವರಿಗೆ 2021 ಫೆಬ್ರವರಿಯಲ್ಲಿ 75 ವರ್ಷ ತುಂಬಿದ ಸಂದರ್ಭದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಬರಬೇಕೆಂಬ ಒತ್ತಾಸೆಯಿದ್ದರೂ ಶೂಟಿಂಗ್ ಇದ್ದ ಕಾರಣ ಬರಲಿಲ್ಲ, ಆ ನಂತರ ಕೊರೊನಾದ ಎರಡನೇ ಅಲೆ ಪ್ರಾರಂಭವಾದ ಕಾರಣ ವಿಜಯ್ ಎಲ್ಲಿಯೂ ಹೋಗಲಾಗಲಿಲ್ಲ, ಆದರೆ ಜೂನ್ 12ರ ರಾತ್ರಿ 11 ಗಂಟೆಯಲ್ಲಿ ಅಪಘಾತಕ್ಕೊಳಗಾಗಿ ಸಂಚಾರ ಮುಗಿಸಿದ್ದಾರೆ. ಈಗ ಸಂಚಾರಿ ವಿಜಯ್ ನೆನಪು ಮಾತ್ರ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?