Saturday, July 27, 2024
Google search engine
Homeಜನಮನನಮ್ಮ ಹುಡುಗ, ನಮ್ಮ ಹೆಮ್ಮೆ ಈ ತರಕಾರಿ ಪ್ರಕಾಶ್

ನಮ್ಮ ಹುಡುಗ, ನಮ್ಮ ಹೆಮ್ಮೆ ಈ ತರಕಾರಿ ಪ್ರಕಾಶ್

ಉಜ್ಜಜ್ಜಿ ರಾಜಣ್ಣ

ತಿಪಟೂರು: ಆಪ್ ತೋಳಿನ ಅಂಗಿ, ಮಾಸಲುಬಣ್ಣದ ಪ್ಯಾಟು, ಕಪ್ಪುಬಿಳುಪಾದ ಗಡ್ಡ. ಮುಖ ನೀರು ಕಂಡಿತ್ತೋ ಕಂಡಿಲ್ಲವೋ ಎಂಬಂತಹ ಹೊರನೋಟಕ್ಕೆ ಮುಖ ಭಾವ. ಆಗ ತಾನೆ ಎದ್ದು ತರಕಾರಿ ಮಾರಿ ಸೀದ ನಗರಸಭಾ ವಾರ್ಷಿಕ ಬಡ್ಜೆಟ್ ಮೀಟಿಂಗ್ ಗೆ ಬಂದಂತೆ ಕಂಡ ಸಾಮಾನ್ಯವಾದ ನಡವಳಿಕೆ‌.

ತಂಬು ಮೈಕಟ್ಟಿನ ದೇಹ. ಆಡುಭಾಷೆಯೋ ಹೌದಾ ಸಾ ಅಲ್ವಾ ಸಾ ಅಂಗ ಸಾ. ಎದೆ ಸವರಿಕೊಂಡು ನಕ್ಕರಂತೂ ಎಲ್ಲಿಲ್ಲದ ಪ್ರೀತಿ ಸರಳತೆ ಸಹನೆ ಅವಸರವಿಲ್ಲದ ಸಾಹುದಾನ ಸಮಾದಾನಿ.

ಮಾತು ಬಂದಾಗ ಪಕಾರನೆ ನಕ್ಕು ಗೆಳೆಯರನ್ನು ಎದುರುಬದುರಾಗುವ ಗುಣ. ಹುಡುಗ ಅಪ್ಪನ ಜೊತೆಯಲ್ಲಿ ಅಪಾರ ವರ್ಷಗಳ ಕಾಲ ತರಕಾರಿ ಮಾರಿಕೊಂಡಿದ್ದ ನಾನು ಕಂಡ ಹಾಗೆ.  ಬೆರಳೆಣಿಕೆಯಷ್ಟೂ ಸ್ವಜಾತಿಯ ಮತ ಹೊಂದಿರದ ಯುವಕ ಟಿ ಎನ್ ಪ್ರಕಾಶ್ ಅರ್ಥಾತ್ ತರಕಾರಿ ಪ್ರಕಾಶ್ ಅರ್ಥಾತ್ ಗೂರ್ಕಾ: ತಿಪಟೂರು ನಗರ ಸಭಾ ಸದಸ್ಯನಾಗಿ ಗೆದ್ದದ್ದು ಇದೂ ಸೇರಿ ಮೂರು ಸಲವಿರಬಹುದು.

ಎರಡು ಬಾರಿ ನಗರ ಸಭಾ ಪ್ರಭಾರ ಅಧ್ಯಕ್ಷ. ಒಂದು ಸಲ ಪೂರ್ಣಾವಧಿಯ ಅಧ್ಯಕ್ಷ.  ಅಬ್ಬಬ್ಬಾ ಈತ ನಿನ್ನೆ ದಿನ ತಿಪಟೂರು ನಗರ ಸಭಾ ವಾರ್ಷಿಕ ಬಡ್ಜೆಟ್ ಮೇಲೆ ಮಾಡಿದ ಭಾಷಣ ಅಂತಹ ಅಪರೂಪವಾದದ್ದು. ವಿಸ್ತಾರವಾಗಿ ಹಾಗು ವಾಣಿಜ್ಯ ನಗರವಾಗಿ ಮತ್ತು ಆದುನಿಕ ನಗರಿಯಾಗಿ ಬೆಳೆಯುತ್ತಿರುವ ಹೆದ್ದಾರಿ ನಗರ ತಿಪಟೂರನ್ನು ಮಾದರಿ ನಗರವನ್ನಾಗಿ ಮಾಡಲು ಟಿ ಎನ್ ಪ್ರಕಾಶ್ ಆಡಿದ ಮಾತುಗಳು ನೀಡಿದ ಸಲಹೆಗಳು ತಿಪಟೂರು ನಗರ ಸಭಾ ಆಡಳಿತ ಸಾರ್ವಕಾಲಿಕವಾಗಿ ಅನುಪಾಲನೆ ಮಾಡುವಂತಹುಗಳಾಗಿದ್ದವು.

ಕರ್ನಾಟಕ ಪೌರಾಡಳಿತ ನಿರ್ದೇಶನಾಲಯದ ಅದಿಸೂಚನೆಗಳು ಮಾರ್ಗ ಸೂಚಿಗಳು ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಸುತ್ತೋಲೆಗಳು ನಗರಸಭಾ ಆ್ಯಕ್ಟ ಬುಕ್ಕನ್ನು ಪದಶಃ ಓದಿ ಬಂದು ನಗರಸಭೆಯ 2021- 22 ನೇ ಸಾಲಿನ ವಾರ್ಷಿಕ ಬಡ್ಜೆಟ್ ಮೇಲೆ ಸ್ವ ಪಕ್ಷೀಯ ಯಾವುದೇ ಪೂರ್ವಗ್ರಹವಿಲ್ಲದೆ ತಿಪಟೂರು ನಗರಾಡಳಿತದ ಗಮನ ಸೆಳೆದರು ಪ್ರಕಾಶ್.

ಕೈತುಂಬಾ ಸಂಬಳ, ಅಪಾರವಾಗಿ ಆದಾಯ, ಕಾಲಕಾಲಕ್ಕೆ ಆಗಬೇಕಾಗಿರುವ ತರಬೇತಿ, ದಿನವಹಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕಾದ ಸರ್ಕಾರದ ನಡಾವಳಿಗಳು ನಗರಾಭಿವೃದ್ಧಿ, ಪೌರಾಡಳಿತ ಇವೆಲ್ಲವನ್ನೂ ಪರಮಾರ್ಶಿಸಿದ ಹಾಗೆ ನೋಡಿದರೆ ನಗರಸಭಾ ಆಡಳಿತ ಅಕ್ಷರಶಃ ವಾರ್ಷಿಕ ಬಡ್ಜೆಟ್ ತಯಾರಿಸಲು ಅತ್ಯಂತ ಬೇಜವಾದ್ದಾರಿ ತೋರಿದೆ.

ಕಾಟಾಚಾರಕ್ಕೆ ಬಡ್ಜೆಟ್ ಪ್ರತಿಯನ್ನು ಸಿದ್ದಪಡಿಸಿದೆ. ನಮ್ಮ ಕೈ ಸೇರಿರುವ ನಗರಸಭಾ ಬಡ್ಜೆಟ್ ಪ್ರತಿಗಳು ತಳಬುಡವಿಲ್ಲದ ಪ್ರತಿಗಳು ಎಂಬುದರ ಅರಿವಾದದ್ದು ನಗರಸಭಾ ಮಾಜಿ ಅಧ್ಯಕ್ಷ ಟಿ ಎನ್ ಪ್ರಕಾಶ್ ಬಡ್ಜೆಟ್ ಕುರಿತು ಮಾತನಾಡಿದಾಗ. ಸುಳ್ಳು ಸುಳ್ಳೇ ಆದಾಯದ ನಿರೀಕ್ಷೆ ಸುಳ್ಳುಸುಳ್ಳೇ ಖರ್ಚಿಗೆ ಅವಕಾಶ. ನಗರ ಸಭೆಗೆ ಬರುವ ಆದಾಯ ವಾರ್ಷಿಕ ವ್ಯಯಗಳಿಗೆ ತುಲನೆ ಮಾಡಿದರೆ ಎತ್ತು ಏರಿ ಕಡೆ ಕೋಣ ನೀರಿನ ಕಡೆ ಎಳೆದಂತಿತ್ತು. ಮಾಜಿ ಅಧ್ಯಕ್ಷ ಟಿ ಎನ್ ಪ್ರಕಾಶ್ ತಿಪಟೂರು ನಗರ ಸಭಾ 2021- 22 ನೇ ವಾರ್ಷಿಕ ಬಡ್ಜೆಟ್ ಮೇಲೆ ಎತ್ತಿದ ಪ್ರಶ್ನೆಗಳು ಆಡಳಿತವನ್ನು ನಿರುತ್ತರಗೊಳಿಸಿದವು.

ಒಬ್ಬ ಅಧಿಕಾರಿಯೂ ಮಾಜಿ ಅಧ್ಯಕ್ಷರ ಭಾಷಣಕ್ಕೆ ಉತ್ತರಿಸಲಾಗದೆ ತಬ್ಬಿಬ್ಬಾದರು ಬೆವರಿದರು ಮುಖವರಸಿಕೊಂಡರು ಸಾವರಿಸಿಜೊಂಡು ಉಸಿರಾಡಿದರು ಒಮ್ಮೊಮ್ಮೆ ಏದುಸಿರಿಕ್ಕಿದರು. ಬೆಚ್ಚಿಬಿದ್ದರು ಎದೆ ಡವಗುಟ್ಟಿಸಿಕೊಂಡು ಮಾಜಿ ಅಧ್ಯಕ್ಷರ ಭಾಷಣಕ್ಕೆ ಕಿವಿ ಆನಿಸಿದರು.

ತಿಪಟೂರು ನಗರ ಸಭೆಯ ನಿಜವಾದ ಸಂಸದೀಯ ಪಟು ತರಕಾರಿ ಪ್ರಕಾಶ್ ಸದನ ಶೂರ. ಧನ್ಯವಾದಗಳು ಅಭಿನಂದನೆಗಳು ಪ್ರಕಾಶ. ನಮ್ಮ ಹುಡುಗ ನಮ್ಮ ಹೆಮ್ಮೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?