ಕೊರಟಗೆರೆ ತಾಲ್ಲೂಕಿನ ಕೋಳಾಲ ಗ್ರಾಮ ಪಂಚಾಯತಿ ಪಿಡಿಒ ಎಚ್.ವಿ.ಕೋಮಲ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಜಿ.ಪಂ.ಸಿಇಒ ಗುರುವಾರ ಆದೇಶ ಹೊರಡಿಸಿದ್ದಾರೆ.
ಬಿದರೆಗುಟ್ಟೆ ಗ್ರಾಮದ ಅಂಗನವಾಡಿ ಕಟ್ಟಡದ 5 ಲಕ್ಷ ರೂಪಾಯಿಯನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡ ಆರೋಪ ಹಾಗೂ ಹದಿನಾಲ್ಕನೇ ಹಣಕಾಸು ಯೋಜನೆಯ ಹಣ ದುರುಪಯೋಗ ಆರೋಪ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಗೆ ಕಾದಿರಿಸಿ ಅಮಾನತುಗೊಳಿಸಲಾಗಿದೆ.
ಹೋರಾಟದ ಕಥನ
ಪಿಡಿಒ ಆಡಳಿತದ ವಿರುದ್ದ ವಕೀಲ ಕೋಳಾಲ ಚಿನ್ಮಯ ಅವರು ದೂರು ನೀಡಿದ್ದರು.
ಹಣ ದುರುಪಯೋಗದ ಕುರಿತು ಅವರು ಓಬಡ್ಸ್ ಮನ್ ನ್ಯಾಯಾಲಯದಲ್ಲೂ ದೂರು ದಾಖಲಿಸಿದ್ದಾರೆ.
ಇಲ್ಲಿ ಹಗಲು ದರೋಡೆಯನ್ನೇ ನಡೆಸಲಾಗಿದೆ. ನನ್ನ ಹೋರಾಟವನ್ನು ಹತ್ತಿಕ್ಕಲು ಹಲವು ಪ್ರಯತ್ನಗಳನ್ನು ನಡೆಸಿದರು. ಆದರೂ ನಾನು ಧೃತಿಗೆಡದೆ ಹೋರಾಟ ಮುಂದುವರೆಸಿದೆ. ಗ್ರಾ.ಪಂ.ಗಳಲ್ಲಿ ನಡೆಯುತ್ತಿರುವ ಬಗ್ಗೆ ಸ್ಥಳೀಯ ಯುವಕರು ಹೋರಾಟ ಆರಂಭಿಸಬೇಕು ಎಂದು ವಕೀಲ ಕೋಳಾಲ ಚಿನ್ಮಯ ಹೇಳಿದ್ದಾರೆ.