Saturday, July 20, 2024
Google search engine
Homeಜನಮನಶಾಸಕ ಗೌರಿಶಂಕರ್ ಕೆಲಸಕ್ಕೆ ಫಿದಾ ಆದ ಜನರು...

ಶಾಸಕ ಗೌರಿಶಂಕರ್ ಕೆಲಸಕ್ಕೆ ಫಿದಾ ಆದ ಜನರು…

ಹೆತ್ತೇನಹಳ್ಳಿ ಮಂಜುನಾಥ್


ತುಮಕೂರು: ರಾಜ-ಮಹಾರಾಜರಾಗಲಿ, ಮಂತ್ರಿ-ಮಹೋದಯರಾಗಲಿ, ಕಡೆಗೆ ಸಾಮಾನ್ಯನಾಗಿರಲಿ ಒಬ್ಬ ಮನುಷ್ಯ ತನ್ನ ಸಹ ಮನುಷ್ಯರಿಗೆ ಪ್ರೀತಿ-ಗೌರವ, ಕಷ್ಟ-ಸುಖಕ್ಕೆ ಸ್ಪಂದಿಸುವುದೇ ಮನುಷ್ಯನ ಆದ್ಯ ಕರ್ತವ್ಯ, ಅದೇ ಶ್ರೇಷ್ಠ ಕೆಲಸ, ಅದೇ ಮನುಷ್ಯತ್ವ ಹಾಗೂ ಅದೇ #ಶ್ರೇಷ್ಠ_ಧರ್ಮ.

ವ್ಯಾಖ್ಯಾನವನ್ನು ಪ್ರಾರಂಭಿಸಿರುವ ಉದ್ದೇಶವೇನೆಂದರೆ ಇಂದು ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಅಂತಹ ಹತ್ತು ಹಲವಾರು ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದು ತುಮಕೂರು ತಾಲ್ಲೂಕು ತಹಸೀಲ್ದಾರರ ಕಚೇರಿ & ಸಾಕ್ಷಿಯಾದವರು #ತುಮಕೂರು_ಗ್ರಾಮಾಂತರ_ಶಾಸಕರಾದ_ಡಿ_ಸಿ_ಗೌರಿಶಂಕರ್ ಅವರು.

ದಿನಾಂಕ 01-03-2021 ರಂದು ಸಮಸ್ಯೆಗಳನ್ನೊತ್ತು ಬರುವ ಜನಗಳಿಗೆ ಊಟದ ವ್ಯವಸ್ಥೆ ಮಾಡಿಸಿ, ಜನಗಳ ಕಷ್ಟ-ಸುಖಗಳನ್ನು ನೇರವಾಗಿ ಆಲಿಸಿ ಪರಿಹಾರ ನೀಡುವ #ಜನತಾದರ್ಶನ ಎಂಬ ವಿಶೇಷ ಕಾರ್ಯಕ್ರಮವನ್ನು ತುಮಕೂರು ಗ್ರಾಮಾಂತರ ಶಾಸಕರಾದ ಡಿ.ಸಿ ಗೌರಿಶಂಕರ್ ರವರು ಆಯೋಜಿಸಿದ್ದರು.

ಈ ಕಾರ್ಯಕ್ರಮ ವಿಶೇಷವೆಂದು ಹೇಳುತ್ತಿದೇನೆಂದರೆ, ಈ ಕಾರ್ಯಕ್ರಮದಲ್ಲಿ ಕಂಡ ಕೆಲವೊಂದು #ಸೂಕ್ಷ್ಮ_ಸಂವೇದಿ, #ಕರುಳು_ಹಿಂಡುವಂತಹ ವಿಚಾರವನ್ನು ಹಾಗೆ ಆ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿದ ಶಾಸಕರ ಕಾರ್ಯವೈಖರಿಯನ್ನು ಎಳೆ-ಎಳೆಯಾಗಿ ಹೇಳುತ್ತೇನೆ.

#ಶಾಸಕರ_ಇಂದಿನ_ನಡೆ_ನಿಜಕ್ಕೂ_ಜನಸಾಮಾನ್ಯರನ್ನು #ಮೂಕವಿಸ್ಮಿತರನ್ನಾಗಿ_ಮಾಡಿದ್ದರಲ್ಲಿ_ಸಂಶಯವೇ_ಇಲ್ಲಾ.

ಘಟನೆ -೧ :-

#ಒಬ್ಬರು_ಹಿರಿಯರು, ಅಂಗವಿಕಲರು ಆ ಮನುಷ್ಯ ತನಗಾಗಿಯೋ, ತಮ್ಮ ಕುಟುಂಬದ ಕೆಲಸಕ್ಕಾಗಿಯೋ ಶಾಸಕರ ಬಳಿ ಬಂದಿರಲಿಲ್ಲಾ, ಬದಲಾಗಿ #ತನ್ನೂರಲ್ಲಿ_ಜನಗಳು_ಸಾವನ್ನಪ್ಪಿದರೆ_ಹೂಳಲು_ಸ್ಮಶಾನ ಇಲ್ಲಾ, ನಮ್ಮೂರಿಗೊಂದು #ಸ್ಮಶಾನ ಮುಂಜೂರು ಮಾಡಿಕೊಡಿ ಎಂದು ಕೇಳಲು ಬಂದಿದ್ದರು. ನಿಲ್ಲಲು ಆಗದ ಪರಿಸ್ಥಿತಿಯಲ್ಲಿದ್ದ ಆ ಮನುಷ್ಯ ಶಾಸಕರಿಗೆ ತನ್ನ ಅಹವಾಲು ಸಲ್ಲಿಸಿದರು. ಆ ಮನುಷ್ಯನನ್ನು ಕಂಡು ಮಮ್ಮಲೆ ಮರುಗಿದ ಶಾಸಕರು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿ, ಸ್ಥಳದಲ್ಲಿ ತಹಸೀಲ್ದಾರರಿಗೆ ಸರ್ಕಾರಿ ಜಾಗ ಗುರುತಿಸಿ ಸ್ಮಶಾನ ಮಂಜೂರು ಮಾಡುವಂತೆ ತಾಕೀತು ಮಾಡಿದರು.

ಘಟನೆ-2 #ಸುಮಾರು_ಎಂಭತ್ತರ_ಆಸುಪಾಸಿನ_ಒಂದು_ಅಜ್ಜಿ ತನ್ನ ಗಂಡನ ನೆನಪಿಗಾಗಿ, ತನ್ನ ಅಂಗೈಯಗಲ ಜಮೀನಿಗಾಗಿ, ಈ #ಜಮೀನನ್ನು_ನಮಗೆ_ಕಾನೂನುಬದ್ಧವಾಗಿ ಮಾಡಿಕೊಡು ಮಗನೆ ಎಂದು ಅಂಗಲಾಚಿ ಗೋಗರೆದ ಹೃದಯವಿದ್ರಾವಕ ಸನ್ನಿವೇಶ. ಮಕ್ಕಳು ಮೊಮ್ಮಕ್ಕಳು ಯಾರು ಬರೋದಿಲ್ಲಾ ನಾ ಸಾಯುವುದರೊಳಗಾಗಿ ನನ್ನ ಗಂಡನಿಗೋಸ್ಕರ ಆದರೂ ಈ ಜಮೀನು ಉಳಿಸಿಕೊಳ್ಳಬೇಕು ಎಂದು ಕೇಳಿಕೊಂಡು ಗೊಳೋ ಎಂದು ಅಜ್ಜಿ ಅತ್ತಳು. ಕ್ಷಣದಲ್ಲೇ ಆ ಅಜ್ಜಿಯ ಕನಸನ್ನು ಸಾಕಾರಗೊಳಿಸಿದ ಶಾಸಕರು ಯಾರಿಗೂ ಈ ದುಸ್ಥಿತಿ ಬರಬಾರದು ಎಂದು ಮರುಗುತ್ತಾ ಅಜ್ಜಿಯ ಕೆಲಸವನ್ನು ತಹಸಿಲ್ದಾರರ ಸಮಕ್ಷಮದಲ್ಲಿ ಮುಗಿಸಿ ಅಜ್ಜಿಗೆ ಧೈರ್ಯ ಹೇಳಿ #ನಾನು_ನಿನ್ನ_ಮಗನೇ_ಏನೇ_ತೊಂದರೆಯಾದರು_ನನಗೇಳವ್ವ ಎಂದು ತಮ್ಮ ಮೊಬೈಲ್ ನಂಬರ್ ನೀಡುತ್ತಾರೆ.

ಘಟನೆ -3 :- #ಒಬ್ಬ_ಮಾಜಿ_ಸೈನಿಕ, ಸೈನಿಕರಿಗೆ 5 ಎಕರೆ ಜಾಗವನ್ನು ಮಂಜೂರು ಮಾಡಿಸಿಕೊಳ್ಳುವ ಕಾನೂನು ವ್ಯವಸ್ಥೆ ಇದೆ. ಆ ಸೈನಿಕ ಸತತ 8 ವರ್ಷಗಳ ಕಾಲ ತಹಸಿಲ್ದಾರ ಕಛೇರಿಗೆ ಅಲೆದು ಅಲೆದು ಸಾಕಾಗಿ ಕೊನೆಗಿಂದು ಶಾಸಕರ ಗಮನಕ್ಕೆ ತಂದರು. ಮಾಜಿ ಸೈನಿಕ ಎನ್ನುತ್ತಿದ ಹಾಗೇ ಎದ್ದು ನಿಂತು ಮಾಜಿ ಸೈನಿಕರಿಗೆ ಗೌರವ ಸಲ್ಲಿಸಿ ಅವರ ಕೆಲಸವನ್ನು ಆದಷ್ಟೂ ಶೀಘ್ರವೇ ಮುಗಿಸಿವುಂತೆ ತಹಸಿಲ್ದಾರರಿಗೆ ಸೂಚನೆ ನೀಡಿ #ದೇಶಪ್ರೇಮ_ಮೆರೆದರು.

ಘಟನೆ -4 :-

ಸಮಸ್ಯೆಯಿಂದಲೇ ನರಳಾಡಿಕೊಂಡು ಅತ್ಯಲ್ಪ ಸಂಬಳಕ್ಕೆ ತಮ್ಮ ಜೀವನವನ್ನೇ ತೆಯ್ಯುವ, ಅಂಗನವಾಡಿಯಲ್ಲಿ ಮಕ್ಕಳ ಜೀವನ ಕಟ್ಟಲು ಭಧ್ರ ಬುನಾದಿ ಹಾಕಿ ಅದರ ನಡುವೆ ಬದುಕುವಂತಹ #ಅಂಗನವಾಡಿ_ಕಾರ್ಯಕರ್ತೆಯರ ಹಿಂಡೆ ಬಂತು. ಅವರ ಕಷ್ಟಗಳನ್ನಾಲಿಸಿದ ಶಾಸಕರು ಅಂಗನವಾಡಿ ಕಾರ್ಯಕರ್ತೆಯರ ಕಷ್ಟಗಳನ್ನು ಅಧಿವೇಶನದಲ್ಲಿ ಮಾತನಾಡುತ್ತೇನೆ. ನಿಮ್ಮ ಕಷ್ಟಗಳ ಶಾಶ್ವತ ಪರಿಹಾರಕ್ಕಾಗಿ ನಾ ಹೋರಾಟ ಮಾಡುತ್ತೇನೆ ಸದಾ ನಾನು ನಿಮ್ಮೊಡನೆನಿರುತ್ತೇನೆ ಎಂಬ ಸಂದೇಶವನ್ನು ನೀಡಿ, ಆ ನೊಂದ ತಾಯಂದಿರಿಗೆ ಸಾಂತ್ವನ ಹೇಳಿ ಅವರಿಗೆ ನಮಸ್ಕರಿಸಿದರು.

ಘಟನೆ -5 :

– ಕಡೆಯದಾಗಿ ಇದೊಂದನ್ನು ಹೇಳಲೇ ಬೇಕು #ಸುಮಾರು_90_ವರ್ಷದ_ಮುದುಕ ನಿಲ್ಲಲು ಕೂರಲು ಇನ್ನೊಬ್ಬರ ಸಹಾಯ ಬೇಕು. ತನ್ನ ವಂಶಪಾರಂಪರ್ಯದ ಜಮೀನಿಗೆ ಕಾನೂನುಬದ್ದವಾಗಿ ದಾಖಲಾತಿ ಮಾಡಿಸಲು 2 ವರ್ಷದಿಂದೆ ತನ್ನ ಹೆಂಡತಿಯ ಒಡವೆಯನ್ನೆಲ್ಲಾ ಅಡವಿಟ್ಟು ತಾಳಿಯೊಂದನ್ನು ಬಿಟ್ಟು ತಾಲ್ಲೂಕು ಕಛೇರಿಯಲ್ಲಿ 50,000 ರೂಪಾಯಿ ಲಂಚವನ್ನು ನೀಡಿದ್ದರು ಕೆಲಸವೂ ಆಗದೇ ಹಣವನ್ನು ನೀಡದೇ ನನಗೆ ಅಯ್ಯೋ ಎನ್ನಿಸುತ್ತಿದ್ದಾರೆ ಎಂದು ದೂರು ನೀಡಿದರು.
ತಾತನ ಕಷ್ಟ ಕೇಳಿದ ಶಾಸಕರ ಕಣ್ಣಾಲಿಗಳಲ್ಲಿ ನೀರು ತುಂಬಿ ಬಂತು. ಕೋಪಗೊಂಡ ಶಾಸಕರು ಆ ಅಧಿಕಾರಿಯನ್ನು ಕರೆದು ಬೈದು ತಾತನಿಗೆ ಹಣವನ್ನು ಬಡ್ಡಿ ಸಮೇತ ಹಿಂದಿರುಗಿಸುವಂತೆ ಹೇಳಿ 15 ದಿನದೊಳಗೆ ಜಮೀನಿನ ದಾಖಲಾತಿ ಕಾನೂನುಬದ್ಧವಾಗಿ ಮಾಡಿಕೊಡುವಂತೆ ತಹಸಿಲ್ದಾರಿಗೆ ಸೂಚಿಸಿದರು. ಇದನ್ನು ಕಂಡು ಸಂತಸಗೊಂಡ ತಾತ, ಶಾಸಕರಿಗೆ ನೀನು ನೂರ್ಕಾಲ ಬಾಳಪ್ಪ ಎಂದು ಆಶಿರ್ವದಿಸಿ ಅಳುತ್ತಾ ಅಲ್ಲಿಂದ ಹೊರಟರು.

ಇಂದು ತಹಸಿಲ್ದಾರ್ ಕಛೇರಿಯ ಮುಂದೆ ಎಲ್ಲವೂ ಕಣ್ಣೀರು ತರಿಸುವ ಘಟನೆಗಳೇ. ಹತ್ತು ಹಲವಾರು ಜನಗಳ ಕಷ್ಟಗಳಿಗೆ, ಕೆಲಸಗಳಿಗೆ ಸ್ಥಳದಲ್ಲೇ ಪರಿಹಾರ ಕೊಡಿಸಿ #ಜನಮಾನಸದಲ್ಲಿ_ಶಾಶ್ವತವಾಗಿ_ಉಳಿಯುವಂತಹ_ಶಾಸಕರ_ಕೆಲಸಕ್ಕೆ_ಜನ_ಮೆಚ್ಚುಗೆ_ವ್ಯಕ್ತಪಡಿಸಿದರು.

ಮೊದಲ ದಿನದ ಜನತಾದರ್ಶನಕ್ಕೆ ಬಂದಂತಹ 1246 ಅರ್ಜಿಗಳಲ್ಲಿ ಸ್ಥಳದಲ್ಲೇ 500 ಜನಕ್ಕೆ ಶಾಶ್ವತವಾದಂತಹ ಪರಿಹಾರವನ್ನು ನೀಡಿದರು. ಹತ್ತಾರು ವರ್ಷ ಅಲೆದರೂ ಜೊತೆಗೆ ಅಧಿಕಾರಿಗಳಿಗೆ ಲಂಚ ನೀಡಿದರೂ ಆಗದ ಕೆಲಸವನ್ನು ಶಾಸಕರು ಕುಳಿತಲ್ಲೆ ಮಾಡಿ ಜನರ ಮುಖದಲ್ಲಿ ನಗು & ಭರವಸೆ ಮೂಡಿಸಿದ್ದಾರೆ.
ಶಾಸಕರ ಇಂದಿನ ಕಾರ್ಯವೈಖರಿ ಪ್ರತಿಯೊಬ್ಬ ಚುನಾಯಿತ ಪ್ರತಿನಿಧಿಗಳಿಗೆ ಮಾದರಿಯಾಗುವಂತದ್ದು. ಪ್ರೀತಿಯಿಂದ ಮತ ಹಾಕಿದ್ದಕ್ಕೆ ಸಾಕಲ್ಲವೇ ಇಷ್ಟು ?
#ಅಲ್ಲಿದ್ದ_ಜನ_ಶಾಸಕರನ್ನು_ನೋಡಿ_ಈ_ಕಾಲದಲ್ಲೂ_ಇಂತಹ_ಸರಳ_ಶಾಸಕರು_ಇದ್ದಾರಾ_ಎಂದು_ಆಶ್ಚರ್ಯ_ಪಟ್ಟರು_ಜೊತೆಗೆ_ಈ_ಶಾಸಕರು #ಬರೀ_ಸರಳರಲ್ಲಾ, #ಸರಳತೆಯಲ್ಲೇ_ಸಾಹುಕಾರರು ಎಂದು ಹರ್ಷ ವ್ಯಕ್ತ ಪಡಿಸಿದರು. ಇಂದು ಶಾಸಕರು ಮಾಡಿದಂತಹ ಕೆಲಸ, ತೋರಿದಂತಹ ಪ್ರೀತಿ ನಿಜವಾಗಲೂ ಅಕ್ಷರಸಹಃ #ಸರಳತೆಯ_ಸಾಹುಕಾರ ಎಂದು ನಿರೂಪಿಸಿತು.

ಜನತಾದರ್ಶನಾ ಕಾರ್ಯಕ್ರಮದ ನಂತರ ಮಾತನಾಡಿದ ಶಾಸಕರೂ ಭ್ರಷ್ಟಾಚಾರಮುಕ್ತ ಸಮಾಜದ ನಿರ್ಮಾಣವೇ ನನ್ನ ಮುಖ್ಯ ಗುರಿ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?