Wednesday, December 6, 2023
spot_img
Homeಧಾರ್ಮಿಕಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

ಛಲವಾದಿ ಕಾಯಕಕ್ಕೆ ಜಿ.ಡಿ.ಯೋಗೀಶ್ ನೇಮಕ

Publicstory/prajayoga

ಗುಬ್ಬಿ: ಪಟ್ಟಣದ ಐತಿಹಾಸಿಕ ಗೋಸಲ ಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ ಛಲವಾದಿ ಕಾಯಕ ನಡೆಸುತ್ತಿದ್ದ ಕೆಂಚ ಮಾರಯ್ಯ ಅವರ ನಿವೃತ್ತಿ ಹಿನ್ನಲೆ ಜಿ.ಡಿ.ಯೋಗೀಶ್ ಅವರನ್ನು ನೇಮಕ ಮಾಡಿ ಹದಿನೆಂಟು ಕೋಮಿನ ಮುಖಂಡರ ಸಮ್ಮುಖದಲ್ಲಿ ಅಧಿಕೃತ ಘೋಷಣೆ ಮಾಡಲಾಯಿತು.

ಈ ವೇಳೆ ಜಿ.ಡಿ.ಯೋಗೀಶ್ ಮಾತನಾಡಿ, ದೇವಾಲಯದ ಗಂಧ ಬಟ್ಟಲು ಹೊತ್ತು ಧಾರ್ಮಿಕ ಸೇವೆ ನಡೆಸುವ ಶ್ರೇಷ್ಠ ಕಾಯಕವನ್ನು ಅಚ್ಚುಕಟ್ಟಾಗಿ ನಡೆಸಿ ಹದಿನೆಂಟು ಕೋಮಿನ ಭಕ್ತರು ಹಾಗೂ ದೇವಾಲಯದ ವಿಧಿ ವಿಧಾನಗಳಂತೆ ನಡೆದುಕೊಳ್ಳುವುದಾಗಿ ದೀಕ್ಷೆ ಪಡೆದು ಮಾತನಾಡಿದರು.

ಈ ಸಂದರ್ಭದಲ್ಲಿ ದೀಕ್ಷಾ ಕಾರ್ಯವನ್ನು ಹದಿನೆಂಟು ಕೋಮಿನ ಮುಖಂಡ ಪಟೇಲ್ ಕೆಂಪೇಗೌಡ, ಪಪಂ ಸದಸ್ಯರಾದ ಕುಮಾರ್, ರೇಣುಕಾ ಪ್ರಸಾದ್, ಪ್ರಕಾಶ್, ಮುಖಂಡರಾದ ಕುಮಾರಯ್ಯ, ಸೋಮಶೇಖರಪ್ಪ, ವಿಜಯಕುಮಾರ್, ಅರ್ಚಕರಾದ ರಾಜು, ರುದ್ರೇಶ್, ನಾರಾಯಣ್ ಇತರರು ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Kusum prasad T.L on ಕವನ ಓದಿ: ಹೂವು
Anithalakshmi. K. L on ಕವನ ಓದಿ: ಹೂವು