Saturday, July 27, 2024
Google search engine
Homeಕ್ರೀಡೆಅಥ್ಲೆಟಿಕ್: 3 ಚಿನ್ನದ ಪದಕ ಗೆದ್ದ ಶ್ರೀನಿವಾಸ್

ಅಥ್ಲೆಟಿಕ್: 3 ಚಿನ್ನದ ಪದಕ ಗೆದ್ದ ಶ್ರೀನಿವಾಸ್

Pavagada/Tipturu: ಥೈಲ್ಯಾಂಡ್ ಅಂತರ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟ -2024
ಈಚೆಗೆ ಥೈಲ್ಯಾಂಡ್ ನ ‘Sakhon Nakon’ ನಗರದ ರಾಜಭಟ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಥೈಲ್ಯಾಂಡ್ ಅಂತರ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಕಲ್ಪತರು ನಾಡು ತುಮಕೂರು ಜಿಲ್ಲೆಯ ಗಡಿನಾಡಾದ ಪಾವಗಡ ತಾಲ್ಲೂಕಿನ ವೈ.ಎನ್.ಹೊಸಕೋಟೆಯ ನಮ್ಮೆಲ್ಲರ ಹೆಮ್ಮೆಯ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಶ್ರೀ ಶ್ರೀನಿವಾಸ ಭೈರಪ್ಪ, ಇವರು ವಿವಿಧ ಸ್ಪರ್ಧೆಗಳಾದ ತ್ರಿವಿಧ ಜಿಗಿತ ಸ್ಪರ್ಧೆ, 4X100 ಮೀ.ರಿಲೇ ಓಟದ ಸ್ಪರ್ಧೆ ಮತ್ತು 4X400 ಮೀ.ರಿಲೇ ಓಟದ ಸ್ಪರ್ಧೆಗಳಲ್ಲಿ ಮೂರು ಚಿನ್ನದ ಪದಕಗಳು ಹಾಗೂ 400 ಮೀ. ಓಟದ ಸ್ಪರ್ಧೆಯಲ್ಲಿ ಕಂಚಿನ ಪದಕ ಹಾಗೂ 4X100 ಮೀ.ಮಿಶ್ರ ರಿಲೇ ಓಟದ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕಗಳನ್ನು ಪಡೆದು ಭಾರತ ದೇಶಕ್ಕೆ ಹಾಗೂ ನಮ್ಮ ಕರುನಾಡಿಗೆ ಕೀರ್ತಿ ತಂದಿರುತ್ತಾರೆ.

ಶ್ರೀನಿವಾಸ.ಬಿ ರವರು ಯ.ನಾ.ಹೊಸಕೋಟೆ ಗ್ರಾಮದ ಮೂಲ ನಿವಾಸಿಗಳಾಗಿದ್ದು, ಪ್ರಸ್ತುತ ಇವರು ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಖಾಯಂ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ದೇಶಕ್ಕೆ ಕೀರ್ತಿಯನ್ನು ತಂದ ಭಾರತಾಂಭೆಯ ಹೆಮ್ಮೆಯ ಪುತ್ರನಿಗೆ ಎಲ್ಲರ ಪರವಾಗಿ ತುಮಕೂರು ಗೆಳೆಯರ ಬಳಗದಿಂದ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?