Friday, July 26, 2024
Google search engine
Homeಜಸ್ಟ್ ನ್ಯೂಸ್ಸುಜೀವನ: ಗುರುದತ್ ಹೇಳಿದ್ದೇನು?

ಸುಜೀವನ: ಗುರುದತ್ ಹೇಳಿದ್ದೇನು?

ಗುಬ್ಬಿ : ಸಂಘಗಳು ನಿರಂತರವಾಗಿ ಉಳಿತಾಯದಲ್ಲಿ ತೊಡಗಿಕೊಳ್ಳ ಬೇಕು. ಬ್ಯಾಂಕಿನಲ್ಲಿ ಪಡೆದ ಸಾಲ ವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದಾಗ ಮಾತ್ರ ಸಂಘ ಮತ್ತು ಬ್ಯಾಂಕಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ಐಡಿಎಫ್ ಸುಜೀವನ ಒಕ್ಕೂಟ ಅಧ್ಯಕ್ಷ ಕೆ.ಎನ್.ಗುರುದತ್ ತಿಳಿಸಿದರು.

ಪಟ್ಟಣದ ಎಸ್ಎಲ್ಎನ್ ರೈಸ್ ಮಿಲ್ ಆವರಣದಲ್ಲಿ ಐಡಿಎಫ್ ಸುಜೀವನ ಒಕ್ಕೂಟದ ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಮೌಲ್ಯವರ್ಧನೆ ಮಾಡಿಕೊಳ್ಳಲು ತರಬೇತಿಯನ್ನು ಒಕ್ಕೂಟದಿಂದ ನೀಡಲಾಗುತ್ತದೆ. ಆದ್ದರಿಂದ ಮಹಿಳಾ ಸದಸ್ಯರು ಮತ್ತು ಪುರಷರ ಸಂಘಗಳು ನಮ್ಮ ಸಿಬ್ಬಂದಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನ ಅಮೂಲ್ಯ, ಪ್ರತಿಯೊಬ್ಬರಲ್ಲೂ ವಿವಿಧ ರೀತಿಯ ಪ್ರತಿಭೆಗಳಿವೆ. ಅವುಗಳನ್ನು ಅವಕಾಶ ಸಿಕ್ಕಗ ಬಳಸಿಕೊಳ್ಳಬೇಕು ನಿಮ್ಮ ಶ್ರಮದಿಂದಲೇ ನೀವು ಅತ್ಯಂತ ಹೆಚ್ಚು ಅಂಕ ಗಳಿಸಿದ್ದರೂ ಸಹ ಈ ಸಾಧನೆಯ ಹಿಂದೆ ಪಾಲಕರು ಹಾಗೂ ಶಿಕ್ಷಕರ ಮಾರ್ಗದರ್ಶನವು ಮೂಲ ಕಾರಣವಾಗಿದೆ. ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿ ನಲ್ಲಿ ಉತ್ತಮವಾಗಿ ಸಂಘವನ್ನು ನಡೆಸಿಕೊಂಡ ಸಂಘಗಳಿಗೆ ಉತ್ತಮ ಸಂಘ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸದಸ್ಯರ ೨೩ ವಿದ್ಯಾರ್ಥಿಗಳಿಗೆ ತಲಾ ೫ ಸಾವಿರದಂತೆ ಪ್ರೋತ್ಸಹಧನ ನೀಡಲಾಯಿತು ಎಂದರು.

ಮೂ.ಲ.ಕೆಂಪೇಗೌಡ ಮಾತನಾಡಿ, ರೈತರು ಸುಸ್ಥಿರ ಕೃಷಿ ಮಾಡಿ ಕೊಂಡು ಸುಸ್ಥಿರ ಜೀವನ ಸಾಗಿಸ ಬೇಕು. ತಾಲ್ಲೂಕಿನಲ್ಲಿ ಇರುವ ರೈತ ಉತ್ಪಾದಕರ ಕಂಪನಿಗಳಲ್ಲಿ ವ್ಯವಹಾರ ಮಾಡಿ ಕಂಪನಿಗಳನ್ನು ಲಾಭದಾಯಕವಾಗಿ ಮಾಡುವಲ್ಲಿ ಷೇರುದಾರರ ಕೊಡುಗೆ ಮಹತ್ವ ದ್ದಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಐಡಿಎಫ್ ಸುಜೀವನ ಒಕ್ಕೂಟ ಉಪಾಧ್ಯಕ್ಷರು ಹರೀಶ್ ವೈ.ಆರ್. ದತ್ತಿಮಂಡಳಿ ಸದಸ್ಯರಾದ ಪುಟ್ಟ ಸ್ವಾಮಣ್ಣ, ರೇವಣ್ಣ, ಶಿವಶಂಕರ್, ಸೌಭಾಗ್ಯ, ಕವಿತಾ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಕರುಣಾಕರ್, ಸಿಇಒ ಗುರುಪ್ರಸಾದ್, ಚನ್ನಶೆಟ್ಟಿ ಹಳ್ಳಿ ಯತೀಶ್ಕುಮಾರ್, ಬಾಬು, ಶಿವನಾಗಪ್ಪ, ಗಾಯಿತ್ರಿ, ಗಂಗೇ ಗೌಡ, ರಂಗಮ್ಮ, ರಂಗನಾಥ, ಕೆಂಪೇಗೌಡ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಎಂ.ಆರ್. ನಾಗಲಿಂಗಮೂರ್ತಿ, ಕೃಷಿ ವಿಸ್ತಾರ ಣಾಧಿಕಾರಿ ಸಿ.ಜಯಶ್ರೀ, ರಾಕೇಶ್ ಮತ್ತಿತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?