ಸಾಹಿತ್ಯ ಸಂವಾದ

ಚಿಟ್ಟೆ ಮತ್ತು ಜೇನು

ದೇವರಹೊಸಹಳ್ಳಿ ಧನಂಜಯ


ಬಣ್ಣದ ಚಿಟ್ಟೆ
ಕೋಟಿ ಹೂ ಮುಟ್ಟಿದರು
ಜೇನ್ ಆಗಲಿಲ್ಲ

ದುಂಬಿಯ ಶ್ರಮ
ಜೇನು ಹುಟ್ಟಿ ಸೇರಿತು
ಸದ್ದು ಮಾಡದೆ

ಭ್ರಮೆ ಬಿತ್ತಿದ
ಪಾತರಗಿತ್ತಿ ಪಾತ್ರೆ
ತುಂಬಲೇ ಇಲ್ಲ


ನಿಮ್ಮೂರಿನ ಸುದ್ದಿ, ಲೇಖನ, ನಿಮ್ಮ ಬರಹಗಳನ್ನು ವಾಟ್ಸಾಪ್ ಮಾಡಿ: 9844817737


ಹಿತ್ಲವ್ರೆ ಹೂವು
ದುಂಬಿ ವರಿಸಿ ಜೇನು
ಕತ್ತಲೆ ನಿಧಿ

ಲೋಕದ ತುಂಬಾ
ಸಂಚಾರಿ ಚಿಟ್ಟೆ, ಮಟ್ಟೆ
ಮಣ್ಣು ಸೇರಿತ್ತು

ಜೇನ ಕೊಳ್ಳೆಯು
ಜೀವ ಪಲ್ಲವಯಾನ
ಪರಾಗ ರಾಗ

ತನ್ನ ಶ್ರಮವ
ತಾನೆ ಉಣ್ಣದ ಜೇನು
ಜಗದ ಗುರು.


ಈ ಕವಿತೆಯ ಪ್ರತೀ ಪ್ಯಾರವೂ ಒಂದೊಂದು ಹಾಯ್ಕುಗಳಾಗಿವೆ.
ಒಟ್ಟಾಗಿ ನೋಡಿದಾಗ ಸಮಗ್ರ ಕವಿತೆಯೂ ಆಗಿದೆ.
ಹಾಯ್ಕು ಎಂಬುದು ಜಪಾನಿನ ವಿಶಿಷ್ಟ ಕವಿತೆ ಕಟ್ಟುವ ಕ್ರಮ.
3 ಸಾಲುಗಳುಳ್ಳ 17 ಅಕ್ಷರದ ಕವಿತೆಗಳು ಮೊದಲ ಸಾಲಿನಲ್ಲಿ 5 ಎರಡನೇ ಸಾಲಿನಲ್ಲಿ 7 ಹಾಗೂ ಮೂರನೇ ಸಾಲಿನಲ್ಲಿ ಐದು ಅಕ್ಷರಗಳು ಇರುತ್ತವೆ ಒತ್ತಕ್ಷರಗಳು ಮತ್ತು ಅರ್ಕಾವತ್ತು ಗಳನ್ನು ಒಂದೇ ಅಕ್ಷರ ಎಂದು ಪರಿಗಣಿಸಲಾಗುತ್ತದೆ ಅರ್ಧ ಅಕ್ಷರಗಳನ್ನು ಪರಿಗಣಿಸಲಾಗುವುದಿಲ್ಲ-ಕವಿ

Comment here