Publicstory/prajayoga
ತಿಪಟೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ಪಡೆಯುತ್ತಿದ್ದ ರೈತರು ಮುಂದೆಯೂ ಈ ಸೌಲಭ್ಯವನ್ನು ಪಡೆಯಬೇಕೆಂದರೆ ಎಲ್ಲಾ ರೈತರು ತಮ್ಮ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಇ- ಕೆವೈಸಿ ಮಾಡುವ ಮೂಲಕ ಜೋಡಣೆ ಮಾಡಬೇಕಾಗಿದೆ ಎಂದು ತಹಶಿಲ್ದಾರ್ ಚಂದ್ರಶೇಖರ್ ತಿಳಿಸಿದರು.
ನಗರದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ಆಧಾರ್ ಜೋಡಣೆ ಮಾಡುವ ರೀತಿ ಆ್ಯಂಡ್ರಾಯ್ಡ್ ಮೊಬೈಲ್ ಗೂಗಲ್ ಸರ್ಚ್ ನಲ್ಲಿ ಪಿಎಂ ಕಿಸಾನ್ ಕೆವೈಸಿ ಎಂದು ಒಟಿಪಿ ಕೊಟ್ಟು, ಮೊಬೈಲ್ ಸಂಖ್ಯೆ ನಮೂದಿಸಿದಾಗ ಬಂದ ಒಟಿಪಿ ನಂಬರ್ ಅನ್ನು ಲಿಂಕ್ ನಲ್ಲಿ ನಮೂದಿಸಬೇಕು. ಈ ರೀತಿ ಕೆವೈಸಿ ಮಾಡಬೇಕಾಗಿದೆ. ಹೆಚ್ಚಿನ ಮಾಹಿತಿಗೆ ಗ್ರಾಮ ಒನ್ ಸೆಂಟರ್ ಅಥವಾ ಕರ್ನಾಟಕ ಒನ್ ಸೆಂಟರ್ ನಲ್ಲಿ ರೈತರು ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.