Thursday, March 28, 2024
Google search engine
Homeಸಾಹಿತ್ಯ ಸಂವಾದಅಪ್ಪ, ಮಗಳಿಗೆ ಒಲಿದ ಅಕಾಡೆಮಿ ಪುಸ್ತಕ ಬಹುಮಾನ

ಅಪ್ಪ, ಮಗಳಿಗೆ ಒಲಿದ ಅಕಾಡೆಮಿ ಪುಸ್ತಕ ಬಹುಮಾನ

Tumkuru: ಅಪ್ಪ ಮಗಳು ಇಬ್ಬರೂ ಈ ಬಾರಿಯ ಪುಸ್ತಕ ಬಹುಮಾನಕ್ಕೆ ಭಾಜನರಾಗಿದ್ದಾರೆ.

ತುಮಕೂರಿನ ಸಾಹಿತಿಗಳಾದ ಎಸ್ ಗಂಗಾಧರಯ್ಯ ಹಾಗೂ ಅವರ ಮಗಳು ಸ್ಮಿತಾ ಮಾಕಳ್ಳಿ ಇಬ್ಬರಿಗೂ ಈ ಸಾಲಿನ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ.

ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಹಿತಿಗಳಿಗೆ ಕನ್ನಡ ಸಾಹಿತ್ಯ ಅಕಾಡೆಮಿ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಪ್ರೊ.ಕೆ.ಜಿ.ನಾಗರಾಜಪ್ಪ, ಆಯ್ಕೆಯಾಗಿದ್ದಾರೆ.

ಇವರ ಜೊತೆಗೆ ಬಾಬು ಕೃಷ್ಣಮೂರ್ತಿ,, ಉಷಾ ಪಿ.ರೈ, ಪ್ರೊ.ಲಕ್ಷ್ಮಣ ತೆಲಗಾವಿ, ಡಾ.ವೀರಣ್ಣ ರಾಜೂರ ಅವರೂ ಕೂಡ 2019ನೇ ಸಾಲಿನ ವರ್ಷದ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಸಂತಕುಮಾರ್ ತಿಳಿಸಿದ್ದಾರೆ.

ಗೌರವ ಪ್ರಶಸ್ತಿ 50 ಸಾವಿರ ರೂಪಾಯಿ ನಗದು, ಪ್ರಮಾಣಪತ್ರವನ್ನು ಒಳಗೊಂಡಿದೆ. ಇದೇ ವೇಳೆ ಕನ್ನಡ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿಗೆ 10 ಮಂದಿ ಕವಿಗಳು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಸೃಜನಶೀಲ ಸಾಹಿತ್ಯದಲ್ಲಿ 5 ಮಂದಿ, ಸೃಜನೇತರ ಕ್ಷೇತ್ರದಿಂದ 3 ಮತ್ತು ಸಾಹಿತ್ಯ ಪರಿಚಾರಿಕೆ ವಿಭಾಗದಿಂದ 1 ಹಾಗೂ ಹೊರನಾಡು ಕನ್ನಡಿಗ ವಿಭಾಗದಿಂದ ಒಬ್ಬರಿಗೆ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಸಾಹಿತ್ಯಶ್ರೀ ಪ್ರಶಸ್ತಿಗೆ ಡಾ. ಅಮರೇಶ್ ನುಗಡೋಣಿ, ಡಾ.ವಿ.ಎಸ್.ಮಾಳಿ, ಸುಬ್ಬ ಹೊಲೆಯಾರ್, ಡಾ.ಶಾರದ ಕುಪ್ಪಂ, ಪಿ.ಶಿವಣ್ಣ, ಡಾ.ಎಂ.ಎಸ್. ವೇದಾ, ಪ್ರೊ.ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪರಾಜೆ, ವಸುಧೇಂದ್ರ ಆಯ್ಕೆಯಾಗಿದ್ದಾರೆ.

ಸಾಹಿತ್ಯಶ್ರೀ ಪ್ರಶಸ್ತಿಯು 25 ಸಾವಿರ ರೂಪಾಯಿ ನಗದು, ಪ್ರಮಾಣ ಪತ್ರವನ್ನು ಒಳಗೊಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?