Saturday, July 27, 2024
Google search engine
Homeಜಿಲ್ಲೆಸಾಹಿತಿಗಳ ವಿಭಜಿಸುವ ಕೆಲಸ: ಬರಗೂರು

ಸಾಹಿತಿಗಳ ವಿಭಜಿಸುವ ಕೆಲಸ: ಬರಗೂರು

ತುಮಕೂರು: ಸಾಹಿತಿಯಾದವ ಸತ್ಯವನ್ನು ಜನರಿಗೆ ಹೇಳುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಬೇಕಿದೆ.ಯಾವ ಸರಕಾರವಿದ್ದರೂ ದಿಟ್ಟವಾಗಿ ಸತ್ಯ ಹೇಳಿ,ಮರ್ಯಾದಸ್ತರಾಗಬೇಕು ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.

ನಗರದ ಗಾಜಿನಮನೆಯ ಹೆಚ್.ಎಮ್.ಗಂಗಾಧರಯ್ಯ ವೇದಿಕೆಯಲ್ಲಿ ನಡೆದ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೆಳನದ ಸಮಾರೋಪ ಭಾಷಣ ಮಾಡಿದ ಅವರು,1963ರಲ್ಲಿಯೇ ಅಂದಿನ ಸರಕಾರ ಕನ್ನಡ ಭಾಷೆಯಲ್ಲಿ ನಾಮಫಲಕ ಅಳವಡಿಸಲು ಅವಕಾಶ ಕಲ್ಪಿಸಿದೆ.ಆದರೆ ಇದುವರೆಗೂ ನಮ್ಮನ್ನು ಆಳಿದ ಸರಕಾರಗಳು ನಿರ್ಲಕ್ಷ ಮಾಡಿಕೊಂಡು ಬಂದಿವೆ. ಹಾಗಾಗಿ ಇಂದು ನಾವು ಕನ್ನಡ ನಾಮಫಲಕಕ್ಕಾಗಿ ಪ್ರತಿಭಟನೆಗೆ ಇಳಿಯುವಂತಹ ಸ್ಥಿತಿ ಬಂದಿದೆ.ಸರಕಾರದ ನಿರ್ಧಾರ ಸ್ವಾಗಾತಾರ್ಹ.ಹಾಗೆಯೇ ಕನ್ನಡ ಭಾಷೆಯನ್ನು ಅನ್ನಭಾಷೆಯಾಗಿಸಿದರೆ ಮಾತ್ರ ಉಳಿಗಾಲ ಎಂಬುದನ್ನು ನಾವ್ಯಾರು ಮೆರೆಯುವಂತಿಲ್ಲ ಎಂದರು.

ಕನ್ನಡವೆಂಬುದು ಕೇವಲ ಬೋರ್ಡಿನಲ್ಲಿದ್ದರೆ ಸಾಲದು,ಅದು ಬದುಕಿಗೆ ಬರಬೇಕು.ಆಗ ಮಾತ್ರ ಜನ ತಮ್ಮ ತಾಯಿ ಭಾಷೆಯನ್ನು ಒಪ್ಪಿಕೊಂಡು,ಅಪ್ಪಿಕೊಳ್ಳಲು ಸಾಧ್ಯ,ನಾವೆಲ್ಲರೂ ಈ ನಿಟ್ಟಿನಲ್ಲಿ ನಡೆಯೋಣ.ಕನ್ನಡ ನಾಡಿನ ಸಾಹಿತಿಗಳು ಸ್ವಾತಂತ್ರ ಪೂರ್ವದಲ್ಲಿಯೂ ಮತ್ತು ಸ್ವಾತಂತ್ರ ನಂತರದಲ್ಲಿಯೂ ಸಾಹಿತ್ಯದ ಸ್ವಾಯತತ್ತೆ, ಸಾಹಿತ್ಯದಲ್ಲಿ ಜಾತ್ಯಾತೀತತೆ ಹಾಗೂ ಪ್ರಜಾಸತ್ತಾತ್ಮಕತೆಯನು ಉಳಿಸಿಕೊಂಡು ಬಂದಿದೆ.ಇಕ್ಕಟ್ಟು,ಬಿಕ್ಕಟ್ಟುಗಳ ಸಂದರ್ಭದಲ್ಲಿ ಕೆಲವರು ತಮ್ಮ ಸಾಹಿತ್ಯದ ಮೂಲಕ ಮಾತನಾಡಿದರೆ,ಕೆಲವರು ಭಾಷಣದ ಮೂಲಕ ಮಾತನಾಡುತ್ತಿದಾರೆ.ಆದರೆ ಕೆಲವೊಮ್ಮೆ ಮೌನವೂ ಪ್ರತಿಭಟನೆಯ ಸಂಕೇತವಾಗಿರುತ್ತದೆ ಎಂದ ಬರಗೂರು ರಾಮಚಂದ್ರಪ್ಪ,ಕೆಲ ಲೇಖಕರು ಸರಕಾರ ವನ್ನು ನಾವೇ ತಂದಿದ್ದು ಎಂಬಂತೆ ಮಾತನಾಡುತಿದ್ದಾರೆ. ಇದು ಸಲ್ಲದು ಎಂದರು.

ಪ್ರಸ್ತುತ ಬೌದ್ಧಿಕ ವಲಯವನ್ನು ವಿಭಜಿಸುವ ಪ್ರಕ್ರಿಯೆ ನಡೆಯುತ್ತಿದ್ದು,ಇದು ಆತಂಕಕಾರಿ ವಿಷಯವಾಗಿದೆ. ಭಿನ್ನಾಭಿಪ್ರಾಯ ಗಳ ನಡುವೆ ಸಂವಾದ ನಡೆದರೆ,ಆಗಿರುವ ತಪ್ಪುಗಳನ್ನು ಸರಿ ಪಡಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಬಹುದು. ಪ್ರಗತಿಗಾಮಿಗಳು ಮತ್ತು ಪ್ರತಿಗಾಮಿಗಳ ನಡುವೆ ವಿಚಾರ ವಿನಿಮಯ ಆಗತ್ಯವಿದೆ ಎಂದು ಬರಗೂರು ರಾಮಚಂದ್ರಪ್ಪ ಪ್ರತಿಪಾದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?