ಚಿ.ನಾ,ಹಳ್ಳಿ: ತಾಲ್ಲೂಕಿನ 28 ಕೆರೆಗಳಿಗೆ ಹೇಮಾವತಿ ನೀರು ಹರಿಸಲು ರಾಜ್ಯ ಸಚಿವ ಸಂಪುಟ ತೆಗೆದುಕೊಂಡಿರುವ ನಿರ್ಧಾರವನ್ನು ನೀರಾವರಿ ಹೋರಾಟಗಾರರಾದ ವಕೀಲ ಬಿ.ಜೆ.ಮಹಾವೀರ್ ಸ್ವಾಗತಿಸಿದ್ದಾರೆ.
ಒಂದು ಕಾಲದಲ್ಲಿ ತೆಂಗಿಗೆ ನಾಡಿನೆಲ್ಲಡೆ ಹೆಸರಾಗಿದ್ದ ತಾಲ್ಲೂಕು ಎರಡು ದಶಕಗಳಿಂದ ಭೀಕರ ಬರಗಾಲಕ್ಕೆ ಸಿಲುಕಿ ನಲುಗಿದೆ. ವ್ಯಾಪಕವಾಗಿ ತೋಟ-ತುಡಿಕೆಗಳು ಒಣಗಿ ಹೋಗಿವೆ. ಕೃಷಿಕರು ಊರು ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಕುಡಿಯಲು ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 28 ಕೆರೆಗಳನ್ನು ಹೇಮಾವತಿ ನದಿ ನೀರಿನಿಂದ ತುಂಬಿಸಲು ರಾಜ್ಯ ಸರ್ಕಾರದ ನಿರ್ಧಾರ ಶಾಘ್ಲನೀಯವಾಗಿದೆ ಎಂದು ಹೇಳಿದ್ದಾರೆ.
ತಾಲ್ಲೂಕಿಗೆ ಹೇಮಾವತಿ ನೀರಿಗಾಗಿ ಹಲವು ಹೋರಾಟಗಳು ನಡೆದಿವೆ. ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಕಾರ್ಯಕರ್ತರು, ಸಂಘಟನೆಗಳು, ನೀರಾವರಿ ಹೋರಾಟಗಾರರ ಫಲ ಇದಾಗಿದೆ. ಸಚಿವ ಸಂಪುಟದ ನಿರ್ಧಾರದ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರ ಶ್ರಮ ಇರುವುದು ಎದ್ದು ಕಾಣುವಂತಿದೆ. ಜನರ ಭಾವನೆಗಳಿಗೆ ಅವರು ಬೆಲೆ ನೀಡಿದ್ದಾರೆ. ತಾಲ್ಲೂಕಿಗೆ ಕೊನೆಗೂ ನ್ಯಾಯ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.
ಮರಳು ಗಣಿಗಾರಿಕೆಗೆ ಅವಕಾಶ ಬೇಡ: ಕೆರೆ, ತೋಡುಗಳಲ್ಲಿ,ಹಳ್ಳಗಳಲ್ಲಿ ಮರಳು ತೆಗೆಯಲು ಬಿಡಬೇಕು ಎಂದು ಸಚಿವರು ಹೇಳಿರುವುದು ಸಲ್ಲದು. ಅಕ್ರಮ ಮರಳುಗಣಿಗಾರಿಕೆಗೆ ಸಿಲುಕಿ ತಾಲ್ಲೂಕಿನ ಅಂತರ್ಜಲ ಕುಸಿದು ಹೋಗಿದೆ, ಮರಳು ಬೋರ್ ಗಳಲ್ಲಿ ಹಿಂದೆಲ್ಲ ನೀರು ಬರುತ್ತಿತ್ತು. ಅಂಥ ಪರಿಸ್ಥಿತಿ ಇಲ್ಲದಂತಾಗಲು ಯತ್ಥೇಚ್ಛವಾಗಿ ತೆಗೆದ ಮರಳು ಕಾರಣ. ಇದನ್ನು ಅರಿಯದಷ್ಟು ಸಚಿವ ಮಾಧುಸ್ವಾಮಿ ದಡ್ಡರಲ್ಲ. ಮರಳು ತೆಗೆಯಲು ಅವಕಾಶ ನೀಡುವಂತೆ ಅವರು ಮಾತನಾಡಿರುವ ಹಿಂದೆ ಪ್ರಬಲ ಶಕ್ತಿಗಳು ಕೆಲಸ ಮಾಡಿರಬಹುದು. ಇಂಥ ಶಕ್ತಿಗಳಿಗೆ ಸಚಿವರು ಮನ್ನಣೆ ನೀಡಬಾರದು. ಬೇರೆ ಕಡೆಯಿಂದ ನೀರು ತರುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವುದು ಆಗಿದೆ ಎಂದು ಮಹಾವೀರ್ “ಪಬ್ಲಿಕ್ ಸ್ಟೋರಿ’ಗೆ ತಿಳಿಸಿದ್ದಾರೆ.
ಚಿ,ನಾ.ಹಳ್ಳಿ ಕೆರೆಗಳಿಗೆ ನೀರು: ಸ್ವಾಗತ
RELATED ARTICLES
Recent Comments
ಗುರು on
ಕೊಳಲ ಕರೆ on
ಕೊಳಲ ಕರೆ on
ಕೋರೋಣ on
ಸರಗಳವು on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on
ನಾನು ಬಿದಿರು… on