Sunday, July 21, 2024
Google search engine
Homeತುಮಕೂರು ಲೈವ್ಎನ್ ಎಸ್ ಎಸ್ ಸಂವಿಧಾನದ ಆಶಯಕ್ಕೆ ನೀರೆರೆಯಲಿ

ಎನ್ ಎಸ್ ಎಸ್ ಸಂವಿಧಾನದ ಆಶಯಕ್ಕೆ ನೀರೆರೆಯಲಿ

ತುಮಕೂರು: ಶ್ರಮದಾನ, ಸ್ವಚ್ಛತೆಯ ಜತೆಗೆ ಸಂವಿಧಾನದ ಆಶಯಗಳನ್ನು ಜನಸಾಮಾನ್ಯರ ನಡುವೆ ಬಿತ್ತುವ ಕೆಲಸವನ್ನು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಪ್ರಮುಖ ಗುರಿಯಾಗಿಸಿಕೊಳ್ಳಬೇಕು ಎಂದು ಸುಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ರಮೇಶ್ ಹೇಳಿದರು.

ಸುಫಿಯಾ ಕಾನೂನು ಕಾಲೇಜಿನಲ್ಲಿ ನಡೆದ ಎನ್ ಎಸ್ ಎಸ್ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್ ಎಸ್ ಎಸ್ ಸೇರುವುದರಿಂದ ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಲಿದೆ. ಅಲ್ಲದೇ ಬದುಕಿನ ಗುರಿಯನ್ನು ಹೊಂದಲು ಸಹಾಯ ಮಾಡಲಿದೆ ಎಂದರು.

ಸಮಾಜದಲ್ಲಿ ಶಾಂತಿ ಸಾಮರಸ್ಯ, ಸಹೋದರತೆ, ಆರ್ಥಿಕ ಸಮಾನತೆಯ ಕುರಿತು ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕು ಎಂದರು.

ರಾಷ್ಟ್ರೀಯ ಸೇವಾ ಯೋಜನೆಯ ಸಿದ್ಧಾರ್ಥ ಕಾಲೇಜಿನ ಎನ್ ಎಸ್ ಎಸ್ ಕಾರ್ಯಕ್ರಧಿಮಾರಿ ರವಿಕಿರಣ್ ಬಿ.ಎಸ್. ಮಾತನಾಡಿ, ಎನ್ ಎಸ್ ಎಸ್ ಗಾಂಧೀಜಿಯವರ ಕನಸಾಗಿತ್ತು. ಸ್ವಚ್ಛತೆಯ ಮೂಲಕ ಕಾನೂನು ಅರಿವು, ಮಹತ್ವದ ಬೆಳವಣಿಗೆಗಳನ್ನು ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಬಹುದು. ಎನ್ ಎಸ್ ಎಸ್ ನಲ್ಲಿ ಉನ್ನತ ಸ್ಥಾನ ಗಳಿಸಿದರೆ ಉದ್ಯೋಗದಲ್ಲೂ ಮೀಸಲಾತಿ ಸಿಗಲಿದೆ ಎಂದರು.

ಸುಫಿಯಾ ಲಾ ಕಾಲೇಜಿ‌ನ ಅಧ್ಯಕ್ಷರಾದ, ಮಾಜಿ ಶಾಸಕ ಎಸ್. ಷಫೀ ಅಹಮದ್ ಮಾತನಾಡಿ, ಕಾಲೇಜಿನ ಬೆಳವಣಿಗೆಯನ್ನು ಶಾಘ್ಲಿಸಿದರು.

ಎನ್ ಎಸ್ ಎಸ್ ಸಂಯೋಜನಾಧಿಕಾರಿ ಮಮತಾ ಪಿ.ಎಲ್, ಉಪ ಪ್ರಾಂಶುಪಾಲರಾದ ಓಬಯ್ಯ, ಗ್ರಂಥಪಾಲಕ ಸುಬ್ರಹ್ಮಣ್ಯ ಎಲ್, ಸೂಪರಿಡಿಂಡ್ ಟೆಂಟ್ ಜಗದೀಶ, ಕಾಲೇಜಿನ ಉಪನ್ಯಾಸಕರಾದ ಖಾಷಿಪ್ ಅಹ್ಮದ್, ಸಯ್ಯದ್ ಜೈನತ್ ತರೊನಂ, ಟಿ.ಜೆ.ಶ್ರೀನಿವಾಸ್,ರೇಣುಕಾ, ಅಶ್ವತ್ಥಕುಮಾರ್, ಸಿಬ್ಬಂದಿ ಪಾಷಾ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?