Wednesday, April 24, 2024
Google search engine
Homeಪೊಲಿಟಿಕಲ್ನೀರಗುಂದ  ಕೆರೆಕೋಡಿಯಲ್ಲಿ 75 ಲಕ್ಷರೂ. ವೆಚ್ಚದ ಸೇತುವೆ ನಿರ್ಮಾಣ

ನೀರಗುಂದ  ಕೆರೆಕೋಡಿಯಲ್ಲಿ 75 ಲಕ್ಷರೂ. ವೆಚ್ಚದ ಸೇತುವೆ ನಿರ್ಮಾಣ

Publicstory/prajayoga

ತುರುವೇಕೆರೆ : ತಾಲೂಕಿನ ನೀರಗುಂದ ಕೆರೆ ಕೋಡಿ ಬಳಿ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಜನತೆಗೆ ನೀಡಿದ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.

ತಾಲ್ಲೂಕಿನ  ಲೋಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಲ್ಲಿ ನಾನಾ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,   ಕ್ಷೇತ್ರ ವ್ಯಾಪ್ತಿಯಲ್ಲಿ  ಈ ಹಿಂದೆ ಅಭಿವೃದ್ಧಿ ಸ್ಪರ್ಶದಿಂದ ವಂಚಿತವಾಗಿದ್ದ ಗ್ರಾಮಗಳಲ್ಲಿ ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮೂಲಸೌಕರ್ಯಗಳಲ್ಲಿ ಅತ್ಯಂತ ಪ್ರಮುಖವಾದ ರಸ್ತೆ, ಕುಡಿಯುವ ನೀರು ಒದಗಿಸಲು ಒತ್ತು ನೀಡಲಾಗುತ್ತಿದೆ. ಚೌಡೇನಹಳ್ಳಿ, ಬಸವನಹಳ್ಳಿ, ಮಂತ್ರಿಕೇನಹಳ್ಳಿ, ಅಜ್ಜೇನಹಳ್ಳಿ, ಲೋಕಮ್ಮನಹಳ್ಳಿ, ಗ್ರಾಮಗಳಲ್ಲಿ ಸಿ.ಸಿ.ರಸ್ತೆಗಳು ಶೀಘ್ರದಲ್ಲಿ ನಿರ್ಮಾಣಗೊಂಡು ಸಾರ್ವಜನಿಕ ಸೇವೆಗೆ ಲಭ್ಯವಾಗಲಿವೆ ಎಂದರು.

ಬಸವನಹಳ್ಳಿ ಮಾರ್ಗದ  ಬೆಸ್ತರಪಾಳ್ಯದ ಜನತೆ ಒತ್ತಾಸೆಯಂತೆ ಸುಮಾರು 700 ಮೀಟರ್ ರಸ್ತೆಯನ್ನು ನಿರ್ಮಿಸಲಾಗುವುದು. ಬಹು ದಿನಗಳ ಕನಸಾದ ಲೋಕಮ್ಮನಹಳ್ಳಿಯಿಂದ ದೊಡ್ಡೇನಹಳ್ಳಿ ವರೆಗೆ ಸುಮಾರು 75 ಲಕ್ಷ ರೂ ವೆಚ್ಚದಲ್ಲಿ  ಡಾಂಬರು ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ದೊರಕಿಸಲಾಗಿದೆ. ಕಾಮಗಾರಿಯ ನಿರ್ವಹಣೆ  ವೇಳೆ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದರು.

ತಾಲೂಕು  ಬಿಜೆಪಿ ಅಧ್ಯಕ್ಷ ಮೃತ್ಯಂಜಯ, ಗ್ರಾಪಂ ಅಧ್ಯಕ್ಷರಾದ ಮಮತಾಕೃಷ್ಣಮೂರ್ತಿ,  ಸದಸ್ಯರಾದ ಶಂಕರಪ್ಪ, ಶಶಿಧರ್, ಅಲ್ಲಪ್ಪ, ಕಾಳಂಜೀಹಳ್ಳಿ ಸೋಮಣ್ಣ, ದುಂಡ ರೇಣುಕಯ್ಯ,  ವಿ.ಟಿ.ವೆಂಕಟರಾಮಯ್ಯ, ಸೋಮೇನಹಳ್ಳಿ ಜಗದೀಶ್, ಅಂಗಡಿಲೋಕಣ್ಣ, ಕರುಣಾಕರ,  ಕುಮಾರಸ್ವಾಮಿ,ವಕೀಲ ನಾಗೇಶ್, ಹರಿಕಾರನಹಳ್ಳಿ ಪ್ರಸಾದ್, ಮತ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?