ಅಗತ್ಯಬಿದ್ದರೆ ರಾಜ್ಯದಲ್ಲೂ ಯೋಗಿ ಆದಿತ್ಯನಾಥ ಸರ್ಕಾರದ ಮಾದರಿಯನ್ನು ಜಾರಿಗೆ ತರುತ್ತೇವೆ ಎಂದು ಮುಖ್ಯಂಮತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
![](https://publicstory.in/wp-content/uploads/2022/07/img-20220725-wa00057911018690812466465.jpg)
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರವೀಣ್ ಕೊಲೆ ಪ್ರಕರಣ ಭೇದಿಸಲು ಐದು ತಂಡ ರಚನೆ ಮಾಡಲಾಗಿದೆ. ಹರ್ಷನ ಕೊಲೆ ಪ್ರಕರಣದಲ್ಲಿ ತಕ್ಷಣ ದಸ್ತಗಿರಿ ಮಾಡಿದಂತೆ ಇಲ್ಲೂ ಆಗುತ್ತದೆ. ಇಂತ ಚಟುವಟಿಕೆ ವಿರುದ್ಧ ಸಮರ ಸಾರಿದ್ದೇವೆ. ಇದರ ಪರಿಣಾಮ ಜನರಿಗೆ ಮುಂದೆ ಗೊತ್ತಾಗುತ್ತದೆ ಎಂದರು.
ಸೌಹಾರ್ದತೆ ಕದಡುವ ಕೆಲಸ ನಡೆಯುತ್ತಿದೆ. ಕಳೆದ ಹತ್ತು ವರ್ಷದಲ್ಲಿ ಈ ಶಕ್ತಿಗಳು ತಲೆ ಎತ್ತಿ ನಿಂತಿವೆ. ನಮ್ಮ ದಕ್ಷ ಪೊಲೀಸರು ಸ್ಲೀಪರ್ ಸೆಲ್ ನಲ್ಲಿರುವ ಉಗ್ರರನ್ನು ಜೈಲಿಗೆ ಕಳಿಸುವ ಕೆಲಸವನ್ನು ಮಾಡಿದ್ದಾರೆ. ನಾವು ಕೈಕಟ್ಟಿ ಕುಳಿತಿಲ್ಲ ಎಂದು ತಿಳಿಸಿದರು.