Sunday, July 21, 2024
Google search engine
Homeಜನಮನಹೃದಯ

ಹೃದಯ

ಹೃದಯವನ್ನು ನಿಯಮಿತವಾಗಿ ಪರಿಶೀಲಿಸಿ ಕೊಳ್ಳಬೇಕು. ಕೋವಿಡ್ ನಂತರ ಹೃದಯ ತಪಾಸಣೆ ಅಗತ್ಯ. ಗ್ಯಾಸ್ಟ್ರಿಕ್ ಎಂದು ನಿರ್ಲಕ್ಷಿಸಬಾರದು. ಬಿಪಿ ಮತ್ತು ಸಕ್ಕರೆ ಯನ್ನು ನಿಯಂತ್ರ ಣದಲ್ಲಿ ಇಡಬೇಕು.. ಈ ಸಂದೇಶವನ್ನು ಭಾವನೆಗಳಿಗೆ ಸಮೀಕರಿಸಿ ತಿಳುವಳಿಕೆ ನೀಡಿದ್ದಾರೆ ಡಾ. ರಜನಿ

ಹೃದಯದಲಿ
ನದಿ ಓಡಿದರೆ ಆಗದು❤️

ರಕ್ತ ಸಲೀಸಾಗಿ
ಸಾಗಬೇಕು😊

ನಲ್ಲನ ನೆನೆದಾಗ
ಬಡಿತ 150 ಆದರೇನು🤗

ಬೆಟ್ಟ ಹತ್ತಿದಾಗ
ಬಡಿದು ಸುಸ್ತಾಗ ಬಾರದು😩

ಎಷ್ಟೇ ಇದ್ದರೂ ಕೊಬ್ಬು
ಹೃದಯದ ಧಮನಿಯಲ್ಲಿ ಕಿಟ್ಟ
ಕಟ್ಟಬಾರದು😉

ನಲ್ಲೆ ಸಿಕ್ಕಾಗ ಎದೆ ಬಡಿತ ತಪ್ಪಬಹುದು
ಅದಾಗಿ ಅದೇ ತಪ್ಪಬಾರದು🥰

I love you too ಅಂದಾಗ ಉಬ್ಬು
ಆದರೆ ಇಸಿಜಿ ಯಲ್ಲಿ ST wave ಉಬ್ಬಬಾರದು😐

ಏದುಸಿರು….😁
ಮೆಟ್ಟಿಲು ಹತ್ತಿದಾಗ ಬರಬಾರದು😐

ಸಿಹಿಮುತ್ತು ಉಂಡಾಗಲೂ
ಸಕ್ಕರೆ ಹೆಚ್ಚಾಗಬಾರದು😘

ರಾಧೆ ಸಿಕ್ಕಾಗಲೂ
BP ಸಮವಾಗಿರಬೇಕು😊

ದಿನಾ ಓಡಬೇಕು
ಓಡಿ ಓಡಿ ಹೃದಯ💜💟

ಪ್ರೀತಿಯ ಬೆವರ ಹನಿ ಬೇಕು
ಸುಮ್ಮನೆ ಬೆವೆತು ಹಣ್ಣಾಗ ಬಾರದು😏

ಗ್ಯಾಸ್ಟ್ರಿಕ್ ಎಂದು
ಹೃದಯವನ್ನು ಮುಚ್ಚಿಡಬಾರದು😦

ಕೋವಿಡ್ ನಂತರ ಹೃದಯ
ಚೆಕ್ ಅಪ್ ಬೇಕು🙏

ನಲ್ಲೆಗಾಗಿ ಸೋಲು
ಬೆಟ್ಟ ಹತ್ತಲು ಸೋಲ ಬೇಡ ಓ ಹೃದಯವೇ😍

ಹೃದಯದಲಿ ಇದೇನಿದು
ನದಿಯೊಂದು ಓಡಿದೆ.


ಡಾ.ರಜನಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?