Saturday, July 20, 2024
Google search engine
Homeತುಮಕೂರು ಲೈವ್ತಂತ್ರಜ್ಞಾನ ಕಲಿಯಿರಿ, ಮಕ್ಕಳಿಗೆ ಕಲಿಸಿರಿ: ಶಿಕ್ಷಕರಿಗೆ ಸಲಹೆ

ತಂತ್ರಜ್ಞಾನ ಕಲಿಯಿರಿ, ಮಕ್ಕಳಿಗೆ ಕಲಿಸಿರಿ: ಶಿಕ್ಷಕರಿಗೆ ಸಲಹೆ

ತುರುವೇಕೆರೆ: ‘ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಕರು ತಂತ್ರಜ್ಞಾನವನ್ನು ಬಳಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಹಾಗು ಕಲಿಕೆಯಲ್ಲಿ ನಿರಂತರತೆಯನ್ನು ಉಂಟು ಮಾಡುವ ಗುರುತರವಾದ ಜವಬ್ದಾರಿ ಶಿಕ್ಷಕರ ಮೇಲಿದೆ’ ಎಂದು ಜಿಲ್ಲಾ ಉಪನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ಎ.ಟಿ.ರಂಗದಾಸಪ್ಪ ಅಭಿಪ್ರಾಯಪಟ್ಟರು.

ಪಟ್ಟಣದ ಜಿಜೆಸಿ ಕಾಲೇಜು ಆವರಣದಲ್ಲಿ ತುಮಕೂರು ಜಿಲ್ಲಾ ಉಪನಿರ್ದೇಶಕರ ಕಚೇರಿ ಹಾಗು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಮಂಗಳವಾರ ಜರುಗಿದ ತಾಲ್ಲೂಕು ಕನ್ನಡ, ಹಿಂದಿ ಭಾಷಾ ಭೋಧಕರ ಶಿಕ್ಷಕರುಗಳ ಕಾರ್ಯಗಾರದಲ್ಲಿ ಮಾತನಾಡಿದರು.

ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು, ನೌಕರರು ಹೀಗೆ ಹಲವರ ಸೇವೆಗೆ ಸಂಬಂಧಿಸಿದ ಮಾಹಿತಿಯನ್ನು ತಂತ್ರಜ್ಞಾನದ ಅಡಿಯಲ್ಲಿ ತರುವ ಉದ್ದೇಶದಿಂದ ಇಡಿಎಸ್ನ ಹದಿನಾಲ್ಕು ಅಂಶಗಳ ಆನ್ಲೈನ್ ಸೇವೆಗಳನ್ನು ಚಾಲ್ತಿಗೆ ತರಲಾಗಿದ್ದು ಅದನ್ನು ಶಿಕ್ಷಕರು ಅರಿತುಕೊಳ್ಳಬೇಕು ಎಂದರು.

ಜಿಲ್ಲಾ ಕನ್ನಡ ವಿಷಯ ಪರಿವೀಕ್ಷಕ ಗಿರೀಶ್ ಮಾತನಾಡಿ, ಕೋವಿಡ್ ಪರಿಣಾಮದಿಂದ ಎಲ್ಲ ಮಕ್ಕಳೂ ಕಲಿಕೆಯಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳಲು ಸಾದ್ಯವಾಗಿಲ್ಲ ಮತ್ತು ಕೋವಿಡ್ 3ನೇ ಅಲೆಯಿಂದ ಭೌತಿಕ ತರಗತಿಗಳು ಒಂದು ವೇಳೆ ಸ್ಥಗಿತಗೊಂಡಲ್ಲಿ ಆಗ ಮಕ್ಕಳಲ್ಲಿ ಕಲಿಕಾ ಪ್ರಕ್ರಿಯೆನ್ನು ನಿರಂತವಾಗಿ ಕಾಯ್ದುಕೊಳ್ಳುವ ಸದುದ್ದೇಶದಿಂದ ಗೂಗಲ್, ಜೂಮ್ ಮತ್ತು ಟೀಚ್ಮೆಂಟ್ ಆಫ್ಗಳ ಮೂಲಕ ಪಾಠ ಬೋಧನೆ ಮಾಡಲು ಎಲ್ಲರೂ ಹೇಗೆ ಸಿದ್ದರಾಗ ಬೇಕಿದೆ.
ಮಕ್ಕಳ ಕೃತಿ ಸಂಪುಟದ ನಿರ್ವಹಣೆಯಲ್ಲಿ ಎದುರಾಗುವ ಗೊಂದಲಗಳು ಮತ್ತು ಪರಿಹಾರಗಳ ಕೂಲಕಂಷವಾಗಿ ತಿಳಿಸಿಕೊಟ್ಟರು. ಕಳೆದ ಬಾರಿಯಂತೆ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪಠ್ಯ ಪುಸ್ತಕದಲ್ಲಿ ಯಾವ ಪಾಠಗಳನ್ನೂ ಕಡಿತ ಮಾಡಲಾಗಿಲ್ಲ ಎಲ್ಲವನ್ನೂ ಬೋಧಿಸಬೇಕು ಎಂದರು.

ಕೋವಿಡ್ ನಿಂದ ಭೌತಿಕ ತರಗತಿಗಳು ನಡೆಯದ ಕಾರಣದ ಮಕ್ಕಳನ್ನು ಮಾನಸಿಕವಾಗಿ ಸಿದ್ದರಾಗುವಂತೆ ಮೊದಲು ಮಾಡಿ ಎಂದು ಶಿಕ್ಷಕರುಗಳಿಗೆ ಸಲಹೆ ನೀಡಿದರು.

ಇದೇ ವೇಳೆ ಹುಲಿಕಲ್ ಸರ್ಕಾರಿ ಪ್ರೌಢ ಶಾಲೆಯ ವಿಷಯ ಸಂಪನ್ಮೂಲ ವ್ಯಕ್ತಿ ಷಣ್ಮುಖಪ್ಪ ವಿವಿಧ ಆಫ್ಗಳ ಮೂಲಕ ಅನ್ಲೈನ್ ತರಗತಿಗಳನ್ನು ನಡೆಸುವ ಬಗ್ಗೆ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಮಾಧವರೆಡ್ಡಿ, ಜಿಲ್ಲಾ ತೋಟಗಾರಿಕಾ ವಿಷಯ ಪರಿವೀಕ್ಷಕ ವೆಂಕಟೇಶಯ್ಯ, ತಾಲ್ಲೂಕು ಕನ್ನಡ ಭಾಷಾ ಬೋಧಕರ ಸಂಘದ ಅಧ್ಯಕ್ಷ ಕೇಶವಮೂರ್ತಿ, ತಾಲ್ಲೂಕು ಹಿಂದಿ ಭಾಷಾ ಬೋಧಕರ ಸಂಘದ ಲಕ್ಷ್ಮೀಪ್ರಸಾದ್, ಮುಖ್ಯ ಶಿಕ್ಷಕ ಶಶಿಕುಮಾರ್ ಮತ್ತು ಶಿಕ್ಷಕರುಗಳು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?