Saturday, July 27, 2024
Google search engine
Homeಪೊಲಿಟಿಕಲ್ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಇತಿಹಾಸ ತೆರೆದು ನೋಡಲಿ : ಎಂ.ಬಿ ಪಾಟೀಲ

ಕಾಂಗ್ರೆಸ್ ಸಾಧನೆ ಪ್ರಶ್ನಿಸುವವರು ಇತಿಹಾಸ ತೆರೆದು ನೋಡಲಿ : ಎಂ.ಬಿ ಪಾಟೀಲ

Publicstory/Prajayoga

ತುಮಕೂರು: ದೇಶಕ್ಕೆ ಸ್ವಾತಂತ್ರ್ಯ ಕಲ್ಪಸಿಕೊಡುವ ನಿಟ್ಟಿನಲ್ಲಿ ಹಾಗೂ ಸಮೃದ್ಧಿ, ಸ್ವಾವಲಂಬನೆ ಕಾಯ್ದುಕೊಳ್ಳುವಲ್ಲಿ ಕಾಂಗ್ರಸ್ ಪಕ್ಷದ ಕೊಡುಗೆ ಅಪಾರ. ಒಮ್ಮೆ ಇತಿಹಾಸವನ್ನು ತೆರೆದು ನೋಡಲಿ  ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ತಿಳಿಸಿದರು.

ನಗರದ ಕಾಂಗ್ರಸ್ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ ಆಹಾರ ಸ್ವಾಲಂಬನೆ ಇರಲ್ಲ. ಗೋದಿ, ಕೆಂಪು ಜೋಳವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಕ್ಷೀರ ಕ್ರಾಂತಿ ಹಾಗೂ ಹಸಿರು ಕ್ರಾಂತಿ ಮೂಲಕ ಅನ್ಯ ರಾಷ್ಟ್ರಗಳಿಗೆ ಆಹಾರ ರಫ್ತುಮಾಡುವಷ್ಟು ಬಲಿಷ್ಟ ರಾಷ್ಟ್ರವಾಗಿದ್ದು, ಪಂಡಿತ್ ಜವಹರಲಲ್ ನೆಹರು ಕಾಲದಲ್ಲಿ. ಸ್ವಾತಂತ್ರ್ಯಾ ನಂತರ ಒಂದು ಸೂಜಿ ಉತ್ಪಾದನೆ ಮಾಡುವಷ್ಟು ಸಾಮರ್ಥ್ಯ ವಿರಲಿಲ್ಲ. ಇಂಡಿಯನ್ ಆಯಿಲ್, ಎಚ್ಎಎಲ್ ಸೇರಿದಂತೆ ನವರತ್ನ ಕಂಪನೆಗಳನ್ನು ಹುಟ್ಟು ಹಾಕಿದ್ದು ಕಾಂಗ್ರೆಸ್ ಎಂಬುದು ನೆನಪಿರಲಿ ಎಂದರು.

ಗ್ರಾಮದಲ್ಲಿನ ಪ್ರಾಥಮಿಕ ಶಾಲೆಯಿಂದ ಐಐಟಿ ವರೆಗೆ, ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಏಮ್ಸ್ ವರೆಗೆ ಸಂಸ್ಥೆಗಳ ಸ್ಥಾಪನೆ ಹಾಗೂ ರೈಲ್ವೆ, ಏರ್ಪೋಟ್, ವಿದ್ಯುತ್ ಸ್ಥಾವರಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕಜಲಾಶಯಗಳ ನಿರ್ಮಾಣವಾಗಿರುವುದು ನೆಹರೂ ಕಾಲದಲ್ಲಿ. ಇವುಗಳಲ್ಲಿ ಒಂದಷ್ಟು ರಾಜರು ನಿರ್ಮಿಸಿರಬಹುದಷ್ಟೆ. ಇವೆಲ್ಲವೂ ಎಂಟು ವರ್ಷಗಳ ಅವಧಿಯಲ್ಲಿ ನಿರ್ಮಾಣವಾದವಲ್ಲ. ಪ್ರಧಾನಿನರೇಂದ್ರ ಮೋದಿ ಅದಿಕಾರಕ್ಕೆ ಬರುವ ಮುಂಚೆಯೇ ನಿರ್ಮಾಣವಾಗಿದ್ದವು ಎಂದು ಹೇಳಿದರು.

ನರೇಂದ್ರ ಮೋದಿ ಅಧಿಮಾರಕ್ಕೆ ಬರುವಾಗ  ನಾನಾ ಭರವಸೆಗಳನ್ನು ಕೊಟ್ಟರು. ದೇಶದ ಚಿತ್ರಣವೇ ಬದಲಾಯಿಸುತ್ತೇನೆ. ಪ್ರತೀ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಎಂದಿದ್ದರು. ಆದರೆ ಅವರು ಅಧಿಕಾರಕ್ಕೆ ಬಂದು ಎಂಟು ವರ್ಷಗಳು ಕಳೆದಿವೆ. ಇಲ್ಲೀವರೆಗೆ ಹದಿನಾರು ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ದುರಾದೃಷ್ಟವಶಾತ್ ಇರುವ ಉದ್ಯೋಗಗಳನ್ನೆ ಜನರು ಕಳೆದುಕೊಂಡರು. ಬಿಜೆಪಿ ಸರ್ಕಾರ ತೆಗಸುಕೊಂಡ ತಪ್ಪು ಆರ್ಥಿಕ ನಿರ್ಧಾರ ಹಾಗೂ ನೋಟ್ ಬ್ಯಾನ್, ಜಿಎಸ್ಟಿ, ಕೊರೊನಾ ನೆರವು ನೀಡದೇ ಇರುವುದು  ಇಷ್ಟೆಲ್ಲಾ ಅನಾಹುತಗಳಿಗೆ ಕಾರಣವಾಗಿದೆ. ರೈತರ ಆದಾಯ ದ್ವಿಗುಣಗೊಳಿಸುತ್ತೇವೆ ಎಂದವರು ಗುಣ ಮಾಡುತ್ತೇವೆಂದವರು, ರೈತರನ್ನೇ ಶೋಷಣೆಗೆ ಒಳಪಡಿಸಿದರು. ನಾವು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಕಪ್ಪು ಹಣ ತಂದು ಎಲ್ಲರ ಖಾತೆಗೆ ಹದಿನೈದು ಲಕ್ಷ ಹಣ ಕಾಕುತ್ತೇವೆಂದು ಹೇಳಿದ್ದರು. ಇಲ್ಲೀವರೆಗೆ ಯಾರಿಗೂ ಬಂದಿಲ್ಲ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಸಮಯದಲ್ಲಿ ಕಚ್ಚಾ ತೈಲ ಬೆಲೆ ನೂರಾ ನಲವತ್ತೈದು ಡಾಲರ್ ಇದ್ದಾಗ  ಲೀಟರ್ ಪೆಟ್ರೋಲ್ ಬೆಲೆ ಅರವತ್ತೈದಿತ್ತು ರೂಪಾಯಿ ಇತ್ತು.  ಈಗ ಕಚ್ಚಾ ನಲವತ್ತೈರಿಂದ ಎಂಬತ್ತರವರೆಗೆ ಇದೆ. ಆದರೆ, ಲೀಟರ್ ಪೆಟ್ರೋಲ್ ಬೆಲೆ ಮಾತ್ರ ನೂರಾ ಐದಕ್ಕೆ ಏರಿಕೆ ಕಂಡಿದೆ. ಇದೇ ಮೋದಿಯವರ ಅಚ್ಚೇದಿನ್. ದಿನ ನಿತ್ಯ ವಸ್ತುಗಳ ಬೆಲೆ  ಗಗನಕ್ಕೇರಿರುವುದರಿಂದ  ಬಡವರು ಬದುಕಲು ಸಾಧ್ಯವಾಗುತ್ತಿಲ್ಲ. ಜಿಎಸ್ಟಿಯಲ್ಲಿ ಅಕ್ಕಿ, ಗೋದಿ ಹಾಲು, ಸೇರಿದಂತೆ ಬಡವರ ಮೊಸರು ಅನ್ನವನ್ನೂ ಬಿಡಲಿಲ್ಲ. ಮಂಡಕ್ಕಿಗೂ ಟ್ಯಾಕ್ಸ್ ಹಾಕಿದರು. ಚಿತಾಗರಕ್ಕೂ 18.30% ತೆರಿಗೆ ಹಾಕಿದ್ದಾರೆ. ಬದುಕುಲು ಬಿಡುತ್ತಿಲ್ಲ, ಸತ್ತ ಮೇಲೂ
ಬಿಡುವುದಿಲ್ಲ ಈ ಭ್ರಷ್ಟ ಬಿಜೆಪಿ ಸರ್ಕಾರ ಎಂದು ಹೇಳಿದರು.

ಕಾಂಗ್ರಸ್ ಜನರ ಬದುಕನ್ಬು ಕಟ್ಟಿಕೊಡುವ ಕೆಲಸ ಮಾಡಿದೆ ಮತ್ತು ಅವರ ಭಾವನೆಗಳನ್ನು ಗೌರವಿಸುತ್ತದೆ.
ಸಿಲಿಕಾನ್ ವ್ಯಾಲ್ಯು ಆಫ್ ಇಂಡಿಯಾ ಆದ ಬೆಂಗಳೂರಿಗೆ ಎಲ್ಲಾ ರಾಜ್ಯಗಳಿಂದಲೂ ಬರುತ್ತಿದ್ದಾರೆ. ಮುಖ್ಯಮಂತ್ರಿ ಹೇಳುತ್ತಾರೆ, ಯುಪಿ ಮಾಡೆಲ್ ಅಂತ. ಅನ್ನ ಭಾಗ್ಯ, ಕ್ಷೀರ ಭಾಗ್ಯ, ಕೃಷಿ ಭಾಗ್ಯ ಸೇರಿದಂತೆ ಜನರಿಗೆ ನಾನಾಭಾಗ್ಯಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಎಂದರು.

ಕಳೆದ ಮೂರು ವರ್ಷದಲ್ಲಿ ಬಿಜೆಪಿ ಬಂದ ಮೇಲೆ ರಾಜ್ಯದಲ್ಲಿ ಏನಜು ಅಭಿವೃದ್ಧಿ ಆಗಿಲ್ಲ. ಯಾವ ಮಂತ್ರಿಗಳು ಏನು ಮಾಡುತ್ತಾರೆ ಎಂಬುದು ಸಿಎಂಗೇ ಗೊತ್ತಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ನಲವತ್ತು ಪರ್ಸೆಂಟ್ ಭ್ರಷ್ಟಾಚಾರ ಸರ್ಕಾರ ಇದು ಎಂದು ಗುತ್ತಿಗೆದಾರರ ಸಂಘ ಆರೋಪಿಸಿರುವುದು ನಮಗೆಲ್ಲಾ ಗೊತ್ತೇ ಇದೆ. ನರೇಂದ್ರ ಮೋದಿಯವರೇ.. ಭ್ರಷ್ಟಾಚಾರಿಗಳ ಮೇಲೆ ಯಾಕಿಲ್ಲ ಇಡಿ ಕೇಸ್, ಭ್ರಷ್ಟಾಚಾರದ ಸಮರ ಏನಿದ್ದರೂ ವಿರೋಧ ಪಕ್ಷಗಳ ಮೇಲೆ ಮಾತ್ರವಾ? ಎಂದು ಪ್ರಶ್ನಿಸಿದರು.

ಈ ರಾಜ್ಯದಲ್ಲಿ ಸರ್ಕಾರ ಇಲ್ಲ. ನಾವು ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ. ಅವರು ಸುಖಾ ಸುಮ್ಮನೆ ಏನನ್ನೂ ಹೇಳುವವರಲ್ಲ. ಜವಾಬ್ದಾರಿ ಸ್ಥಾನದಲ್ಲಿರುವ ಮತ್ತು ಬಿಜೆಪಿ ಪಕ್ಷದವರೇ ಆಗಿ ಹೇಳಿದ್ದಾರೆ ಎಂದರೆ ಯೋಚಿಸಬೇಕಿದೆ. ಈ ಸರ್ಕಾವನ್ನು ಜನ ಕಿತ್ತೊಗೆಯಬೇಕೆಂದು ಕಾಯುತ್ತಿದ್ದಾರೆ ಎಂದರು.

: ತುಮಕೂರಿನಲ್ಲಿ ಇಬ್ಬರು ಕಾಂಗ್ರಸ್ ನಾಯಕರು ಬಿಟ್ಟು ಹೋಗಿದ್ದಾರೆ .
ಅದರಿಂದ ಕಾಂಗ್ರಸ್ ಪಕ್ಷ ನಿರ್ಣಾಮವಾಗಿಲ್ಲ. ಕೆಲವರು ರಾಜೀನಾಮೆ ನೀಡಿದ್ದಾರೆ. ಬೇರೆ ಪಕ್ಷ ಸೇರಿಲ್ಮ. ಇಲ್ಕಿನ ನಾಯಕರು ಮನವೊಲಿಸು ಕೆಲಸ ಮಾಡುವವರಿದ್ದಾರೆ.

ಮುರುಘಾಮಠದ ಪ್ರಕರಣ ತನಿಖಾ ಹಂತದಲ್ಲಿದೆ. ಪಾರದರ್ಶಕವಾಗಿ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಲಿ. ಸಂತ್ರಸ್ತರನ್ನು ಭೇಟಿಯಾಗಲು ಸಾಧ್ಯವಿಲ್ಲ. ನಮ್ಮ ಮಕ್ಕಳಿಗಾದರೂ ನೋವೇ. ಅನ್ಯರ ಮಕ್ಕಳಿಗಾದರೂ ನೋವಾಗುತ್ತದೆ. ನಾನೂ ಗೃಹ ಸಚಿವರಾಗಿದ್ದವನು. ನನ್ನ ಪ್ರಕಾರ ತಕ್ಷಣವೇ ಬಂಧಿಸಬೇಕು ಎಂಬುದಿದೆ. ಇಪ್ಪತ್ನಾಲ್ಕು ಗಂಟೆಯೊಳಗಲ್ಲ ಎಂದು ತಿಳಿಸಿದರು.

ಅತಿವೃಷ್ಟಿಯಾಗಿ ರೈತರಿಗೆ ಅನಾನುಕೂಲವಾಗಿದೆ.
ವಿರೋಧ ಪಕ್ಷದ ನಾಯಕರು ಕೊಡಗಿಗೆ ಹೋದರು. ಬಿಜೆಪಿಯವರು ಮೊಟ್ಟೆ ಹೊಗೆದರು. ಸರ್ಕಾರ ಭ್ರಷ್ಟಾಚಾರದಲ್ಲಿ ಬ್ಯುಸಿಯಾಗಿದೆ. ಕೃಷ್ಣ ಹಾಗೂ ಕೊಡಗಿನಲ್ಲಿ ಆದ ಅನಾಹುತಗಳಿಗೇ ಇನ್ನೂ ಪರಿಹಾರ ನೀಡಿಲ್ಲ ಎಂದರು.

ತುಮಕೂರು ಜಿಲ್ಲೆಯಲ್ಲಿ ಮೂರು ಜನ ಶಾಸಕರಿದ್ದೇವೆ. ಮುಂದಿನ ಬಾರಿ ಎಂಟರಿಂದ ಒಂಬತ್ತು ಸೀಟು ಪಡೆದುಕೊಳ್ಳುತ್ತೇವೆ. ಯಾರೇ ಪಕ್ಷ ತೊರೆದು ಹೋದರೂ ಪಕ್ಷಕ್ಕೆ ನಷ್ಟವಿಲ್ಲ. ಆದರೆ, ಮುದ್ದಹನುಮೇಗೌಡರ ಮನವೊಲಿಸುವ ಕೆಲಸವನ್ನು‌ ಜಿಲ್ಲೆಯ ನಾಯಕರು ಮಾಡಲಿದ್ದಾರೆ. ಅವರಿನ್ನೂ ಬೇರೆ ಪಕ್ಷ ಸೇರಿಲ್ಲ ಎಂದರು.

ಈ ವೇಳೆ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಷಫಿ ಅಹಮದ್, ಮಾಜಿ ಶಾಸಕ ಕೆ.ಶಡಕ್ಷರಿ, ವಿ.ಪ ಸದಸ್ಯ ಆರ್.ರಾಜೇಂದ್ರ, ಜಿಲ್ಲಾ ಬ್ಲಾಕ್ ಕಾಂಗ್ರಸ್ ಸಮಿತಿ ಅಧ್ಯಕ್ಷ ಆರ್.ರಾಮಕೃಷ್ಣ, ಬೆಮೆಲ್ ಕಾಂತರಾಜು, ರಾಯಸಂದ್ರ ರವಿಕುಮಾರ್ ಸೇರಿದಂತೆ ಹಲವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Anithalakshmi. K. L on ಕವನ ಓದಿ: ಹೂವು
Sukanya on ಗುರು
G L Devaraja on ಕೋರೋಣ
Vaishnavi Metri on ಸರಗಳವು
ಬಸವರಾಜ್ ಹೇಮನೂರು on ಕ್ಲಾಸ್ ರೂಂ v/s ನ್ಯೂಸ್ ರೂಂ
ಶಾಂತರಾಜು ಬಿ ಎಸ್ on ಸೂರ್ಯನೇ ದೇವರಾದಾಗ
ಲೋಕೇಶ್ ಭೈರನಾಯ್ಕನಹಳ್ಳಿ on ಅಮ್ಮನ ವಾರವೂ, ಗಿಣ್ಣಿನ ಸೊಬಗೂ…
ಸುನಿಲ್ ಕುಮಾರ್.ವಿ on ಕನ್ನಡ ಪತ್ರಿಕೆಗಳು ಮುಂದೇನು?
ವಾಜಿದ್ ಖಾನ್ ತೋವಿನಕೆರೆ on ತುಮಕೂರಿನ ಹಾವುಕೊಂಡ ಗೊತ್ತಾ?